ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ಆಗಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಲಿದ್ದಾರೆ.ಇದೇ ವೇಳೆ ಮತದಾರರಿಗೆ ಹಣ ಹಂಚಿದ ಆರೋಪದ ಮೇರೆಗೆ ಆದಾಯ ತೆರಿಗೆ ದಾಳಿಗೊಳಗಾದ ಮಂತ್ರಿ ಸಿ. ವಿಜಯಭಾಸ್ಕರ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಚೆನ್ನೈ(ಏ.22): ಅಣ್ಣಾ ಡಿಎಂಕೆಯ ಉಭಯ ಬಣಗಳ ವಿಲೀನ ನಿಶ್ಚಿತವಾಗಿದ್ದು, ತಮಿಳುನಾಡು ಮುಖ್ಯಮಂತ್ರಿಯಾಗಿ ಒ. ಪನ್ನೀರಸೆಲ್ವಂ ಮರಳಲಿದ್ದಾರೆ. ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ರಾಜೀನಾಮೆ ನೀಡಲಿದ್ದು, ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿ ಆಗಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಲಿದ್ದಾರೆ.

Add Asianetnews Kannada as a Preferred SourcegooglePreferred

ಇದೇ ವೇಳೆ ಮತದಾರರಿಗೆ ಹಣ ಹಂಚಿದ ಆರೋಪದ ಮೇರೆಗೆ ಆದಾಯ ತೆರಿಗೆ ದಾಳಿಗೊಳಗಾದ ಮಂತ್ರಿ ಸಿ. ವಿಜಯಭಾಸ್ಕರ್ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ. ಈ ಮೂಲ ವಿಷಯಗಳು ಇತ್ಯರ್ಥವಾಗಿದ್ದು, ಇನ್ನುಳಿದ ವಿಷಯಗಳಿಗೆ ವಿಲೀನ ಮಾತುಕತೆಗಳು ಶೀಘ್ರ ಆರಂಭವಾಗಲಿವೆ ಎಂದು ಅವರು ಹೇಳಿದ್ದಾರೆ.