Asianet Suvarna News Asianet Suvarna News

ರಾಜು ಕನ್ನಡ ಮೀಡಿಯಂ ಪ್ರಸಾರ ತಡೆಗೆ ನೋಟಿಸ್

 ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿರುವ ಹಾಗೂ ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಸಿನಿಮಾ ನಿರ್ಮಾಪಕರಿಂದ ಜಯಣ್ಣ ಫಿಲ್ಮ್ ಸಂಸ್ಥೆಗೆ   ಮೋಸವಾಗಿದೆ ಎನ್ನಲಾಗಿದೆ. 

Notice issued against  Raju Kannada Medium kannada  cinema
Author
Bengaluru, First Published Jul 28, 2018, 7:50 PM IST

ಬೆಂಗಳೂರು (ಜು. 28): ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿರುವ ಹಾಗೂ ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಸಿನಿಮಾ ನಿರ್ಮಾಪಕರಿಂದ ಜಯಣ್ಣ ಫಿಲ್ಮ್ ಸಂಸ್ಥೆಗೆ   ಮೋಸವಾಗಿದೆ ಎನ್ನಲಾಗಿದೆ. 

ನಾಳೆ ಕನ್ನಡ ಜೀ ವಾಹಿನಿಯಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾ ಪ್ರಸಾರ ಹಿನ್ನಲೆ ನಿರ್ಮಾಪಕ ಕೆ ಎ ಸುರೇಶ್’ಗೆ ಜಯಣ್ಣ ಫಿಲ್ಮ್ ಸಂಸ್ಥೆ ನೋಟಿಸ್ ನೀಡಿದೆ. 

ಜಯಣ್ಣ ಫಿಲ್ಮ್ ಸಂಸ್ಥೆಯಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾ ರೈಟ್ಸ್ ಇದ್ದರೂ ನಿರ್ಮಾಪಕ ಕೆ ಎ ಸುರೇಶ್  ಬೇರೆ ವಾಹಿನಿಗೆ ರೈಟ್ಸ್ ನೀಡಿರುವ ಆರೋಪ ಕೇಳಿ ಬಂದಿದೆ.  ಕನ್ನಡ ಜೀ ವಾಹಿನಿ ಹಾಗೂ ರಾಜು ಕನ್ನಡ ಮೀಡಿಯಂ ನಿರ್ಮಾಪಕ ಕೆ ಎ ಸುರೇಶ್’ಗೆ ಸಿನಿಮಾ ಪ್ರಸಾರ ಆಗದಂತೆ  ಸಿಟಿ ಸಿವಿಲ್ ಕೋರ್ಟ್‌ ನಿಂದ ನೋಟಿಸ್ ಕಳುಹಿಸಿದ್ದಾರೆ. 
 

Follow Us:
Download App:
  • android
  • ios