ನಾನು ಮಂತ್ರಿ ಸ್ಥಾನ ಆಕಾಂಕ್ಷಿಯಲ್ಲ: ಶಿವಪಾಲ್ ಯಾದವ್
ನಾನು ಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ನಮ್ಮ ಪಕ್ಷದ ವರಿಷ್ಟ ಮುಲಾಯಾಂ ಸಿಂಗ್ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಈಡೇರಿಸಿದ್ದೇನೆ ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶ (ಅ.27): ನಾನು ಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ನಮ್ಮ ಪಕ್ಷದ ವರಿಷ್ಟ ಮುಲಾಯಾಂ ಸಿಂಗ್ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಈಡೇರಿಸಿದ್ದೇನೆ ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.
“ಪ್ರತಿಯೊಂದು ಕುಟುಂಬದಲ್ಲಿ ಒಗ್ಗಟ್ಟು ಅಗತ್ಯ. ಪಕ್ಷದ ಹೊರಗಿನ ಒತ್ತಡಗಳಿಂದ ನಾವು ಕಿತ್ತಾಡುವಂತಾಗಿದೆ. ನಮ್ಮಲ್ಲಿ ಆಂತರಿಕ ಕಲಹವಿಲ್ಲ. ಸಮಾಜವಾದಿ ಪಕ್ಷ ಒಗ್ಗಟ್ಟಿನಲ್ಲಿದೆ. ನಾನು ಮಂತ್ರಿ ಸ್ಥಾನ ಆಕಾಂಕ್ಷಿಯಲ್ಲ" ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.