Asianet Suvarna News Asianet Suvarna News

ಕಾವೇರಿ ಕಣಿವೆಯಲ್ಲಿ ನೀರಿಲ್ಲ :ವ್ಯತಿರಿಕ್ತವಾಗುತ್ತಾ ಸುಪ್ರೀಂ ತೀರ್ಪು..?

ಕೆಆರ್’ಎಸ್ ಜಲಾಶಯದಲ್ಲಿ  ನೀರಿನ ಒಳಹರಿವು ಕಡಿಮೆಯಾಗಿದೆ. ಇದರಿಂದ  ಜಲಾಶಯದ ನೀರಿನ ಮಟ್ಟ 97 ಅಡಿಗೆ ಕುಸಿದಿದೆ.

No Water In KRS

ಬೆಂಗಳೂರು :  ಕೆಆರ್’ಎಸ್  ಜಲಾಶಯದಲ್ಲಿ  ನೀರಿನ ಒಳಹರಿವು ಕಡಿಮೆಯಾಗಿದೆ. ಇದರಿಂದ  ಜಲಾಶಯದ ನೀರಿನ ಮಟ್ಟ 97 ಅಡಿಗೆ ಕುಸಿದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್’ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಅಲ್ಲದೇ ದಿನೇ ದಿನೇ  ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಕಾವೇರಿ ಕಣಿವೆ ಭಾಗದಲ್ಲಿ ಆತಂಕ ಉಂಟು ಮಾಡಿದೆ. ಫೆಬ್ರವರಿ 4ರಂದು ಸುಪ್ರೀಂಕೋರ್ಟ್’ನಲ್ಲಿ ಕಾವೇರಿ ವಿಚಾರವಾಗಿ ತೀರ್ಪು ಹೊರಬೀಳಲಿದ್ದು, ಒಂದು ವೇಳೆ ರಾಜ್ಯಕ್ಕೆ ವ್ಯತಿರಿಕ್ತವಾದ ತೀರ್ಪು ಹೊರಬಿದ್ದಲ್ಲಿ ಮತ್ತೆ ಕಾವೇರಿ ಚಳುವಳಿಯಾಗುವ ಸಾಧ್ಯತೆಗಳು ಹೆಚ್ಚಿವೆ.

Follow Us:
Download App:
  • android
  • ios