Asianet Suvarna News Asianet Suvarna News

ಮುಂಬೈನಿಂದ ಸೋಮಶೇಖರ್ ಕೊಟ್ಟ ಏಟಿಗೆ ಥರಗುಟ್ಟಿ ಹೋದ ದೋಸ್ತಿ ನಾಯಕರು

ಸಿಎಂ ಕುಮಾರಸ್ವಾಮಿ ಅಮೆರಿಕದಿಂದ ಆಗಮಿಸಿ ಜೆಡಿಎಸ್ ನಾಯಕರು ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿ ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿರುವ ಸಚಿವರಿಗೆ ಸಂದೇಶವೊಂದನ್ನು ನೀಡಬೇಕು ಎಂದುಕೊಂಡಿದ್ದಾಗಲೆ ಅತೃಪ್ತರು ಅಲ್ಲಿಂದಲೇ ಬಾಂಬ್ ಹಾಕಿದ್ದಾರೆ.

no question about withdrawal of Resignation says rebel MLA ST Somashekar
Author
Bengaluru, First Published Jul 7, 2019, 9:07 PM IST

ಬೆಂಗಳೂರು/ ಮುಂಬೈ[ಜು. 07]  ನಾವು ಸಿಎಂ ಬದಲಾಬವಣೆ ಬೇಡಿಕೆಯನ್ನು ಇಟ್ಟಿರಲಿಲ್ಲ. ಮಂತ್ರಿಗಿರಿಯೂ ಬೇಕಿಲ್ಲ. ನಾವು 10 ಶಾಸಕರು ಒಂದಾಗಿದ್ದೇವೆ. ರಾಜೀನಾಮೆ ಹಿಂದಕ್ಕೆ ಪಡೆಯುವ ಮಾತೆ ಇಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮುಂಬೈನಿಂದ ಹೇಳಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅತೃಪ್ತ ಶಾಸಕರ ಪ್ರತಿನಿಧಿಯಾಗಿ ಸೋಮಶೇಖರ್ ಮಾತನಾಡಿದರು. ಮುನಿರತ್ನ ಮತ್ತು ಆನಂದ್ ಸಿಂಗ್ ಸಹ ಸೋಮವಾರ ತಮ್ಮ ಜತೆ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಬೆಂಗಳೂರಿಗೆ ಬಂದಿಳಿದ ಸಿಎಂ HDK ಮುಂದಿರುವ ಕೊನೆಯ 4 ಆಯ್ಕೆ

ಮಾಧ್ಯಮಗಳ ಮೂಲಕ ಈ ಮಾಹಿತಿ ದೋಸ್ತಿ ನಾಯಕರಿಗೆ ರವಾನೆಯಾಗಿದ್ದು ಅನಿವಾರ್ಯವಾಗಿ ಎಚ್ ಡಿ ಕುಮಾರಸ್ವಾಮಿ ಮತ್ತು ಪರಮೇಶ್ವರ ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ.

Follow Us:
Download App:
  • android
  • ios