Asianet Suvarna News Asianet Suvarna News

ಏಕಾಂಗಿಯಾಗಿ ಬಿಜೆಪಿ ಸ್ಪರ್ಧೆ : ಅಮಿತ್ ಶಾ

ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧೆ ಮಾಡಲಾಗುವುದು. ತೆಲಂಗಾಣದಲ್ಲಿ ಟಿಆರ್ ಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

No Alliance With TRS In Telangana Says Amit Shah
Author
Bengaluru, First Published Sep 16, 2018, 11:19 AM IST

ಹೈದರಾಬಾದ್: ತೆಲಂಗಾಣದಲ್ಲಿ ಟಿಆರ್‌ಎಸ್   ಜೊತೆ ಹೊಂದಾಣಿಕೆಯಿಲ್ಲ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ಅಮಿತ್ ಶಾ ಹೇಳಿದ್ದಾರೆ.

ಮೆಹಬೂಬ್ ನಗರ ದಲ್ಲಿ ಸಾರ್ವಜನಿಕ ರ‌್ಯಾಲಿಯೊಂದರಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾ ಪತ್ರಕರ್ತರ ಜೊತೆ ಮಾತನಾ ಡುತ್ತಾ ಈ ವಿಷಯ ತಿಳಿಸಿದರು. ‘ಟಿಆರ್‌ಎಸ್ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳು ತ್ತಿಲ್ಲ,’ ಎಂದರು ಶಾ. 

ಏಕಕಾಲದ ಚುನಾವ ಣೆಗೆ ಟಿಆರ್  ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ ಸಹಮತವಿದ್ದರು. ಆದರೆ, ಆ ನಂತರ ತಮ್ಮ ನಿಲುವು ಬದಲಾಯಿಸಿದ್ದಾರೆ. ಚುನಾ ವಣೆ 9 ತಿಂಗಳು ಮುಂಚಿತ ಮಾಡುವುದಕ್ಕೆ ಕಾರಣವೇನು? ಎಂದು ಅವರು ಪ್ರಶ್ನಿಸಿದರು. 

Follow Us:
Download App:
  • android
  • ios