ಹುರಿಯತ್ ಹಿಂದೆ ಇದೆ ಪಾಕಿಸ್ತಾನ ಕೈವಾಡ; ಹಿಂಸಾಚಾರ ನಡೆಸಲು ಹುರಿಯತ್ ಮುಖಂಡರಿಗೆ ಪಾಕ್’ನಿಂದ ಹಣ
ಕಾಶ್ಮೀರದಲ್ಲಿ ನಡೆಯುತ್ತಿರುವ ದಿನ ನಿತ್ಯದ ದಳ್ಳುರಿಗೆ ಪಾಕಿಸ್ತಾನದ ಎಂಜಲು ಕಾಸು ಬಳಕೆಯಾಗುತ್ತಿದೆ ಎಂಬ ಹಲವು ವರ್ಷಗಳ ಅನುಮಾನಕ್ಕೆ ಈಗ ಅಧಿಕೃತ ಮುದ್ರೆ ಸಿಕ್ಕಿದೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಎಂಬ ಸೋಗು ಹಾಕಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಪೋಸು ಕೊಡುತ್ತಿರುವ ಹುರಿಯತ್ ಕಾಂಗ್ರೆಸ್ ಮುಖಂಡರು ತಿನ್ನುತ್ತಿರುವುದು ಪಾಕಿಸ್ತಾನದ ಎಂಜಲು. ಪಾಕ್ನಿಂದ ಪಡೆದ ಚಿಲ್ಲರೆ ಕಾಸು ಪಡೆದು ಕಾಶ್ಮೀರಿ ಯುವಕರನ್ನು ದೇಶ ವಿರೋಧಿ ಕೃತ್ಯಕ್ಕೆ ಎತ್ತಿ ಕಟ್ಟುತ್ತಿದ್ದಾರೆ.
ನವದೆಹಲಿ (ಸೆ.08): ಕಾಶ್ಮೀರದಲ್ಲಿ ನಡೆಯುತ್ತಿರುವ ದಿನ ನಿತ್ಯದ ದಳ್ಳುರಿಗೆ ಪಾಕಿಸ್ತಾನದ ಎಂಜಲು ಕಾಸು ಬಳಕೆಯಾಗುತ್ತಿದೆ ಎಂಬ ಹಲವು ವರ್ಷಗಳ ಅನುಮಾನಕ್ಕೆ ಈಗ ಅಧಿಕೃತ ಮುದ್ರೆ ಸಿಕ್ಕಿದೆ. ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಎಂಬ ಸೋಗು ಹಾಕಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಪೋಸು ಕೊಡುತ್ತಿರುವ ಹುರಿಯತ್ ಕಾಂಗ್ರೆಸ್ ಮುಖಂಡರು ತಿನ್ನುತ್ತಿರುವುದು ಪಾಕಿಸ್ತಾನದ ಎಂಜಲು. ಪಾಕ್ನಿಂದ ಪಡೆದ ಚಿಲ್ಲರೆ ಕಾಸು ಪಡೆದು ಕಾಶ್ಮೀರಿ ಯುವಕರನ್ನು ದೇಶ ವಿರೋಧಿ ಕೃತ್ಯಕ್ಕೆ ಎತ್ತಿ ಕಟ್ಟುತ್ತಿದ್ದಾರೆ.
24 ವರ್ಷಗಳ ನಂತರ ಹುರಿಯತ್ ಮುಖವಾಡ ಬಯಲು..!
ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಪಾಕ್ ಕುಮ್ಮಕ್ಕಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದಿದ್ದ ಎನ್ಐಎ ಅಧಿಕಾರಿಗಳ ತಂಡ ಇದುವರೆಗೂ 8 ಹುರಿಯತ್ ಕಾನ್ಫರೆನ್ಸ್ ಮುಖಂಡರನ್ನ ಬಂಧಿಸಿದೆ. ಬಂಧಿತ ಹುರಿಯತ್ ಮುಖಂಡನೊಬ್ಬ ಮ್ಯಾಜಿಸ್ಟ್ರೇಟ್ ಎದುರು ಕಾಶ್ಮೀರಿ ಹಿಂಸಾಚಾರಕ್ಕೆ ಪಾಕಿಸ್ತಾನ ನಿರಂತರವಾಗಿ ಹಣ ನೀಡುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮ್ಯಾಜಿಸ್ಟ್ರೇಟ್ ಮುಂದೆ ನೀಡುವ ಹೇಳಿಕೆ ಅತ್ಯಂತ ಪ್ರಮುಖ ಸಾಕ್ಷಿಯಾಗುತ್ತದೆ.
ಹುರಿಯತ್ ಮುಖಂಡನ ತಪ್ಪೊಪ್ಪಿಗೆ ಏನು..?
ಪಾಕ್ ಸೂಚನೆಯಂತೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟ
ಹಿಂಸಾಚಾರ ನಡೆಸಲು ಹುರಿಯತ್ ಮುಖಂಡರಿಗೆ ಪಾಕಿಸ್ತಾನದಿಂದ ಹಣ
ಪಾಕಿಸ್ತಾನದಿಂದ ಬಂದ ಹಣ ಕಾಶ್ಮೀರಿ ಹಿಂಸಾಚಾರಕ್ಕೆ ಬಳಕೆ
ಗಲ್ಫ್ನಲ್ಲಿರುವ ಕಾಶ್ಮೀರಿ ಉದ್ಯಮಿಗಳ ಮೂಲಕ ಹುರಿಯತ್ ಮುಖಂಡರ ಖಾತೆಗೆ ಹಣ
ಉದ್ಯಮಿಗಳ ಮೂಲಕ ಹುರಿಯತ್ ಮುಖಂಡರ ಜೇಬು ಸೇರುತ್ತಿದೆ ಪಾಕ್ ಹಣ
ಹವಾಲಾ/ ಬ್ಯಾಂಕ್ ವ್ಯವಸ್ಥೆ ಮೂಲಕ ಹುರಿಯತ್ ಮುಖಂಡರಿಗೆ ಹಣ
ಟೆರರ್ ಕಮಾಂಡರ್ಗಳಿಗೆ ಹಣ ಕೊಡುವ ಹುರಿಯತ್ ಮುಖಂಡರು
ಪಾಕ್ ಕೈವಾಡದ ಸಾಕ್ಷ್ಯ ನಾಶಕ್ಕೆ ಹುರಿಯತ್ ಮುಖಂಡರ ನಿರಂತರ ಯತ್ನ
ಹುರಿಯತ್ ಕಾನ್ಫರೆನ್ಸ್ ಮುಖಂಡ ಕೋರ್ಟ್ ಮುಂದೆ ಅಧಿಕೃತವಾಗಿ ತಪ್ಪೊಪ್ಪಿಕೊಳ್ಳುತ್ತಿದ್ದಂತೆ ಕಾರ್ಯಾಚರಣೆಗಿಳಿದ ಎನ್ಐಎ ಅಧಿಕಾರಿಗಳ ತಂಡ ಹುರಿಯತ್ ಮುಖಂಡರ ಮನೆಗಳ ಮೇಲೆ ಮುರುಕೊಂಡು ಬಿದ್ದಿದೆ. 27ಕ್ಕೂ ಹೆಚ್ಚು ಹುರಿಯತ್ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು 2.2 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಎನ್ಐಎ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೆಚ್ಚಿ ಬಿದ್ದಿರುವ ಹುರಿಯತ್ ಮುಖಂಡರು ಜೈಲ್ ಬರೋ ಚಳುವಳಿ ಮೂಲಕ ದೆಹಲಿಗೆ ಮುತ್ತಿಗೆ ಹಾಕ್ತೀವಿ ಅಂತ ಅರಚಾಡುತ್ತಿದ್ದಾರೆ.
ಕಾಶ್ಮೀರಕ್ಕೆ ಸ್ವಾತಂತ್ರ್ಯ ಕಲ್ಪಿಸಿ ಇಡೀ ಕಾಶ್ಮೀರವನ್ನು ಪಾಕಿಸ್ತಾನದೊಳಕ್ಕೆ ಬಸಿದುಬಿಡುತ್ತೇವೆ ಎಂದು ಹೊರಟಿದ್ದ ಹುರಿಯತ್ ಕಾನ್ಫರೆನ್ಸ್ ಮುಖಂಡರಾದ ಸೈಯದ್ ಆಲಿ ಶಾ ಗಿಲಾನಿ, ಯಾಸಿರ್ ಮಲಿಕ್, ಉಮರ್ ಫಾರೂಕ್ ಸೇರಿದಂತೆ ಹಲವರನ್ನು ಎನ್ಐಎ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದೆ.
(