5-6 ತಿಂಗಳುಗಳ ಬಳಿಕ ಕೇಂದ್ರ ಸರ್ಕಾರದ ಕ್ರಮದ ಗಂಭೀರವಾದ ದುಷ್ಪರಿಣಾಮಗಳು ಹಣದುಬ್ಬರದ ರೂಪದಲ್ಲಿ ಹೊರಬರಲಿದೆ, ಎಂದು ಸಿಸೋದಿಯಾ ಎಚ್ಚರಿಸಿದ್ದಾರೆ.

ನವದೆಹಲಿ (ನ.14): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಉಪ-ಮುಖ್ಯಮಂತ್ರಿ ಮನೀಶ್ ಸಿಸೋದಿಯಾ, ದೇಶದ ಜನರಿಗೆ ಬೇಕಿರುವುದು ಸಮಸ್ಯೆಗಳಿಗೆ ಪರಿಹಾರವೇ ಹೊರತು, ಪ್ರಧಾನಿಯ ಕಣ್ಣೀರು ಅಲ್ಲವೆಂದು ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ಜನರಿಗೆ ಬೇಕಾಗಿರುವುದು ಸಮಸ್ಯೆಗಳಿಗೆ ಪರಿಹಾರ, ಪ್ರಧಾನಿಯ ಕಣ್ಣೀರು ಅಲ್ಲ. ಏಟಿಎಮ್ ಮುಂದೆ ಕ್ಯೂ ನಿಲ್ಲುವುದು ದೊಡ್ಡ ಸಮಸ್ಯೆಯಲ್ಲ, ವ್ಯಾಪಾರ ವಹಿವಾಟುಗಳು ಕುಸಿದಿರುವುದು, ರೈತರಿಗೆ ಕೃಷಿ ಮಾಡಲು ಸಮಸ್ಯೆಯಾಗುತ್ತಿರುವುದು ದೊಡ್ಡ ಸಮಸ್ಯೆ. 5-6 ತಿಂಗಳುಗಳ ಬಳಿಕ ಈ ಕ್ರಮದ ಗಂಭೀರವಾದ ದುಷ್ಪರಿಣಾಮಗಳು ಹಣದುಬ್ಬರದ ರೂಪದಲ್ಲಿ ಹೊರಬರಲಿದೆ, ಎಂದು ಸಿಸೋದಿಯಾ ಹೇಳಿದ್ದಾರೆ.