ದುನಿಯಾ ವಿಜಯ್ ಪ್ರಕರಣ: ಜಗ್ಗೇಶ್ ಹೇಳಿದ ವಾಲ್ಮೀಕಿ ಕತೆ
ದುನಿಯಾ ವಿಜಯ್ ಪ್ರಕರಣಕ್ಕೆ ಸಂಬಂಧಿಸಿ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಹಾಗಾದರೆ ಜಗ್ಗೇಶ್ ಏನು ಹೇಳಿದ್ದಾರೆ?
ಬೆಂಗಳೂರು[ಸೆ. 23] ಇಷ್ಟು ದಿನದ ಶ್ರಮವನ್ನೆಲ್ಲ ದುನಿಯಾ ವಿಜಯ್ ಹಾಳು ಮಾಡಿಕೊಂಡರು ಎಂದು ವಿಷಾದದ ಅರ್ಥದಲ್ಲಿ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ದುನಿಯಾ ವಿಜಯ್ ಪ್ರಕರಣದ ಎಲ್ಲ ಡಿಟೇಲ್ಸ್
ದುನಿಯಾ ವಿಜಯ್ ಹಲ್ಲೆ ಪ್ರಕರಣ ಬೆಳಗಿನಿಂದಲೂ ಸುದ್ದಿ ಮಾಡುತ್ತಲೆ ಇದೆ. ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ಪೊಲೀಸರು ಬಂಧಿಸಿದ ನಂತರ ಒಂದೊಂದೆ ಪ್ರಕರಣಗಳು ಆಚೆ ಬರುತ್ತಿವೆ.
ಕ್ರೂರನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಿಂದ ರಾಮಾಯಣ ರಚಿಸಿ ಮಹನೀಯನಾದ..
— ನವರಸನಾಯಕ ಜಗ್ಗೇಶ್ (@Jaggesh2) September 23, 2018
ಶಾರದೆಯ ಒಲುಮೆಯಿಂದ ಸಾಮಾನ್ಯ ಅಸಮಾನ್ಯನಾದ #ದುನಿಯವಿಜಿ ಇಂದಿನ ಘಟನೆಯಿಂದ ತನ್ನ ಶ್ರಮವನ್ನು ಗಾಳಿಗೆ ತೋರಿಬಿಟ್ಟ!ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು!ಇಲ್ಲದಿದ್ದರೆ ನಮ್ಮ ಬೆವರಿಗು ಜನರ ಚಪ್ಪಾಳೆಗು ಅಪಮಾನ ಮಾಡಿದಂತೆ.
ನಶ್ವರ ಜಗಕ್ಕೆ ಗುಣವೆ ಶ್ರೀಮಂತಿಕೆ.!