Asianet Suvarna News Asianet Suvarna News

ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಮೋದಿ

ದೂರವಾಣಿಯಲ್ಲಿ ಮಾತನಾಡಿದ ವಿಷಯಗಳ ಬಗ್ಗೆ ದೇವೇಗೌಡರು ಬಹಿರಂಗಪಡಿಸಿಲ್ಲ

narendra modi phone call to devegowda

ಬೆಂಗಳೂರು(ಅ.02): ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮುಂಜಾನೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮೋದಿ ಜೊತೆ ಕೆಲ ನಿಮಿಷಗಳ ಕಾಲ ಮಾತನಾಡಿದ ದೇವೇಗೌಡರು, ನೀರು ಹಂಚಿಕೆ ಮತ್ತು ನಿರ್ವಹಣಾ ಮಂಡಳಿ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ. ದೂರವಾಣಿಯಲ್ಲಿ ಮಾತನಾಡಿದ ವಿಷಯಗಳ ಬಗ್ಗೆ ದೇವೇಗೌಡರು ಬಹಿರಂಗಪಡಿಸಿಲ್ಲ.

ಈ ಕುರಿತು, ಪ್ರತಿಕ್ರಿಯಿಸಿದ ದೇವೇಗೌಡರು, ಪ್ರಧಾನಿ ಮೋದಿಯವರು ಹಾಗೂ ಸಿಎಂ ಸಿದ್ದರಾಮಯ್ಯನ ಮೇಲೆ ವಿಶ್ವಾಸವಿದೆ. ನಾಳೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮೂರು ರಾಜಕೀಯ ಪಕ್ಷಗಳು ಏನು ನಿರ್ಧಾರ ಕೈಗೊಳ್ಳುತ್ತವೆ ನೋಡೋಣ ಅಂತಾ ಹೇಳಿದ್ದಾರೆ.