Asianet Suvarna News Asianet Suvarna News

ಜಾಮೀನು ಅರ್ಜಿ ವಿಚಾರಣೆ: ನಲಪಾಡ್'ಗೆ ಜೈಲಾ ಇಲ್ಲಾ ಬೇಲಾ..?

ನಲಪಾಡ್ ಪರ ಖ್ಯಾತ ವಕೀಲ ಟಾಮಿ ಸೆಬೆಸ್ಟಿಯನ್ ವಾದ ಮಂಡನೆ ಮಾಡಲಿದ್ದು, ನಿನ್ನೆ ರಾತ್ರಿ ವಿದ್ವತ್ ಆರೋಗ್ಯ ವಿಚಾರಿಸಿದ ಹ್ಯಾರಿಸ್ ದಂಪತಿ ಬಳಿಕ ಆತನ ತಂದೆ ಲೋಕನಾಥನ್ ಬಳಿ, ಕೋರ್ಟ್‌'ನಲ್ಲಿ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಬೇಡಿ’ ಎಂದು ಮನವಿ ಮಾಡಿಕೊಂಡರೆನ್ನಲಾಗಿದೆ.

Nalapad Bail Hearing Today

ಬೆಂಗಳೂರು(ಫೆ.23): ಶಾಸಕನ ಪುತ್ರ ಹ್ಯಾರಿಸ್ ಪತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ  ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಶಾಂತಿನಗರದ ಶಾಸಕನ ಪುಂಡ ಪುತ್ರನಿಗೆ ಜಯಲಾ ಬೇಲಾ ಎನ್ನುವುದನ್ನು ಕಾದು ನೋಡಬೇಕಿದೆ.

ನಲಪಾಡ್ ಪರ ಖ್ಯಾತ ವಕೀಲ ಟಾಮಿ ಸೆಬೆಸ್ಟಿಯನ್ ವಾದ ಮಂಡನೆ ಮಾಡಲಿದ್ದು, ನಿನ್ನೆ ರಾತ್ರಿ ವಿದ್ವತ್ ಆರೋಗ್ಯ ವಿಚಾರಿಸಿದ ಹ್ಯಾರಿಸ್ ದಂಪತಿ ಬಳಿಕ ಆತನ ತಂದೆ ಲೋಕನಾಥನ್ ಬಳಿ, ಕೋರ್ಟ್‌'ನಲ್ಲಿ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಬೇಡಿ’ ಎಂದು ಮನವಿ ಮಾಡಿಕೊಂಡರೆನ್ನಲಾಗಿದೆ.

ಆದರೆ, ಹ್ಯಾರಿಸ್ ದಂಪತಿಯ ಮನವಿಗೆ ಪ್ರತಿಕ್ರಿಯೆ ನೀಡದ ಲೋಕನಾಥನ್, ‘ವೈದ್ಯರು ಕರೆಯುತ್ತಿದ್ದಾರೆ’ ಎಂದು ಹೇಳಿ ಆ ಸ್ಥಳದಿಂದ ಹೊರಟು ಹೋಗಿದ್ದಾರೆ. ಕೆಲಹೊತ್ತಾದರೂ ಲೋಕನಾಥನ್ ವಾಪಸ್ ಬರದೆ ಇದ್ದುದರಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಹ್ಯಾರಿಸ್ ದಂಪತಿ ಸಪ್ಪೆಯಾಗಿ ಹೊರಟು ಹೋದರು ಎಂದು ತಿಳಿದು ಬಂದಿದೆ.

Follow Us:
Download App:
  • android
  • ios