ಬೆಂಗಳೂರಿನಲ್ಲಿ  ಹಾಡಹಗಲೇ ಭೀಕರ ಮರ್ಡರ್​ ಆಗಿದೆ.  ಚಲಿಸುತ್ತಿದ್ದ ಬಿಎಂಟಿಸಿ ಬಸ್​’​ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು. 

ಬೆಂಗಳೂರು (ಫೆ.21): ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ ಮರ್ಡರ್​ ಆಗಿದೆ. ಚಲಿಸುತ್ತಿದ್ದ ಬಿಎಂಟಿಸಿ ಬಸ್​’​ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು. 

ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ ಕೋನಪ್ಪನ ಅಗ್ರಹಾರದಲ್ಲಿ ಈ ಭೀಕರ ಘಟನೆ ನಡೆದಿದೆ. ಬಸ್’​ನೊಳಗೆ ನುಗ್ಗಿದ ಮೂವರು ಅಪರಿಚಿತರು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆನೇಕಲ್​’ನಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್​’ನಲ್ಲಿ ಈ ಘಟನೆ ನಡೆದಿದೆ. ​​