ಬಿಎಂಟಿಸಿ ಬಸ್’ನಲ್ಲಿ ಹಾಡಹಗಲೇ ಮರ್ಡರ್
ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ ಮರ್ಡರ್ ಆಗಿದೆ. ಚಲಿಸುತ್ತಿದ್ದ ಬಿಎಂಟಿಸಿ ಬಸ್’ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು.
ಬೆಂಗಳೂರು (ಫೆ.21): ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ ಮರ್ಡರ್ ಆಗಿದೆ. ಚಲಿಸುತ್ತಿದ್ದ ಬಿಎಂಟಿಸಿ ಬಸ್’ನಲ್ಲೇ ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದಾರೆ ಹಂತಕರು.
ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ ಕೋನಪ್ಪನ ಅಗ್ರಹಾರದಲ್ಲಿ ಈ ಭೀಕರ ಘಟನೆ ನಡೆದಿದೆ. ಬಸ್’ನೊಳಗೆ ನುಗ್ಗಿದ ಮೂವರು ಅಪರಿಚಿತರು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆನೇಕಲ್’ನಿಂದ ಬೆಂಗಳೂರಿಗೆ ಬರುತ್ತಿದ್ದ ಬಿಎಂಟಿಸಿ ಬಸ್’ನಲ್ಲಿ ಈ ಘಟನೆ ನಡೆದಿದೆ.