ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯಸಿಕ್ಕ ಸಂಭ್ರಮಾಚರಣೆಯನ್ನು ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದರು..

ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಜಯಸಿಕ್ಕ ಸಂಭ್ರಮಾಚರಣೆಯನ್ನು ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದರು.. ಆದ್ರೆ ಅವರ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಕಿಡಿಗೇಡಿಗಳು ತಮ್ಮ ಹೆಸರಿನಲ್ಲಿ ಮೊಹಮ್ಮದ್ ಹೆಸರನ್ನು ಕಳಚಿ ನಂತರ ಟ್ವೀಟ್ ಮಾಡಿ ಎಂದು ಗೇಲಿ ಮಾಡಿದ್ದರು.. ಇದೀಗ ಕಿಡಿಗೇಡಿಗಳಿಗೆ ಕೈಫ್ ತಕ್ಕ ಉತ್ತರ ನೀಡಿದ್ದಾರೆ. ಜಾತಿ ಧರ್ಮ, ಮತ ಪಂಥಗಳಿಗಿಂತ ದೇಶ ಮೊದಲು ಎಂಬ ಪಾಠ ಮಾಡಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಹರಡುವ ಮುನ್ನ ದೇಶ ಮೊದಲು ನಂತರ ಮಿಕ್ಕ ಎಲ್ಲ ವಿಚಾರ ಎಂಬುದನ್ನು ಕಾಣಿರಿ. ಯಾವುದೇ ಧರ್ಮಕ್ಕಾಗಲಿ ಯಾವುದೇ ಹೆಸರಿಗಾಗಲಿ ಯಾರು ಪಾಳೇಗಾರರಿಲ್ಲ ಎಂದಿದ್ದಾರೆ..