ಮುಸ್ಲಿಂ ವಿಶ್ವಾಸ ಗಳಿಸಲು ಪ್ರಧಾನಿ ಮೋದಿ ಮಾಡಬೇಕಾದ್ದೇನು..?
ಕಳೆದ 70 ವರ್ಷಗಳಿಂದ ಮುಸ್ಲಿಮರ ಮನಸ್ಸಿನಲ್ಲಿ ತುಂಬಾ ವಿಷ ಬೀಜ ಬಿತ್ತಿರುವುದರಿಂದ, ಅವರ ವಿಶ್ವಾಸ ಗಳಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ನವದೆಹಲಿ: ಕಳೆದ 70 ವರ್ಷಗಳಿಂದ ಮುಸ್ಲಿಮರ ಮನಸ್ಸಿನಲ್ಲಿ ತುಂಬಾ ವಿಷ ಬೀಜ ಬಿತ್ತಿರುವುದರಿಂದ, ಅವರ ವಿಶ್ವಾಸ ಗಳಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
2019 ರ ಚುನಾವಣಾ ಪ್ರಚಾ ರದ ವೇಳೆ ತ್ರಿವಳಿ ತಲಾಖ್ ವಿರುದ್ಧ ತಮ್ಮ ಸರ್ಕಾರದ ಪ್ರಯತ್ನವು, ಸಮುದಾಯದ ಅಭಿ ವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ನೆನಪಿಸ ಲಿದೆ. ಹೊಸ ತಲೆಮಾರಿನ ಪ್ರತಿಕ್ರಿಯೆ ಚೆನ್ನಾಗಿದೆ, ಮಹಿಳೆಯರು ಬಿಜೆಪಿಯ ಲಾಭ ಮತ್ತು ನಷ್ಟದ ಬಗ್ಗೆ ಪರಿಶೀಲಿಸುತ್ತಿದ್ದಾರೆ.
ಇದೊಂದು ಅತ್ಯಂತ ಧನಾತ್ಮಕ ಬೆಳವಣಿಗೆ ಎಂದು ನಖ್ವಿ ಅವರು ಹೇಳಿದ್ದಾರೆ.