Asianet Suvarna News Asianet Suvarna News

ರೆಸಾರ್ಟ್ ನಿಂದ ಹೊರ ಬಂದ JDS ಶಾಸಕ

ರೆಸಾರ್ಟ್ ಸೇರಿದ್ದ ಜೆಡಿಎಸ್ ಶಾಸಕರೋರ್ವರು ಇದೀಗ ಹೊರ ಬಂದಿದ್ದು, ಈ ವೇಳೆ ರಾಜಕೀಯ ನಾಟಕದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 

MLC Sharavana come out of resort where JDS MLAs are stayed
Author
Bengaluru, First Published Jul 11, 2019, 12:36 PM IST

ದೇವನಹಳ್ಳಿ [ಜು.11] : ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ಮುಂದುವರಿದಿದೆ. ಹಲವು ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದಾರೆ. ಇತ್ತ ಉಳಿದವರನ್ನು ಕಾಪಾಡಿಕೊಳ್ಳುವ ಸಲುವಾಗಿ ಜೆಡಿಎಸ್ ಮುಖಂಡರು ತಮ್ಮ ಶಾಸಕರನ್ನು ದೇವನಹಳ್ಳಿ ರೆಸಾರ್ಟ್ ನಲ್ಲಿ ಇರಿಸಿ ರಕ್ಷಣೆ ನೀಡಿದ್ದಾರೆ. 

15ಕ್ಕೂ ಹೆಚ್ಚು ಶಾಸಕರನ್ನು ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್ ನಲ್ಲಿ ಇರಿಸಿದ್ದು, ಇವರೊಂದಿಗೆ ತೆರಳಿದ್ದ MLC ಶರವಣ ರೆಸಾರ್ಟ್ ನಿಂದ ಹೊರ ಬಂದಿದ್ದಾರೆ. 

ಕರ್ನಾಟಕ ರಾಜಕೀಯ ಪ್ರಹಸನದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕರ ಪಾಳಯವನ್ನು ಅಲ್ಲಿಯೇ ಬಿಟ್ಟು ಹೊರ ಬಂದ ಶರವಣ ರಾಜಕೀಯ ವಿಚಾರಗಳ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ನಡೆದಿದ್ದಾರೆ.  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಶಾಸಕ ಶರವಣ ನಿರಾಕರಿಸಿದ್ದಾರೆ.

Follow Us:
Download App:
  • android
  • ios