ವಿದ್ವತ್ ತಂದೆ ಬಳಿ ಸಂಧಾನಕ್ಕೆ ಮುಂದಾದರಾ ಶಾಸಕ ಹ್ಯಾರೀಸ್ ?
ಪುತ್ರ ನಲಪಾಡ್'ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್’ನನ್ನು ಭೇಟಿ ಮಾಡಲು ಶಾಸಕ ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ್ದಾರೆ. ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಬೆಂಗಳೂರು (ಫೆ. 28): ಪುತ್ರ ನಲಪಾಡ್'ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್’ನನ್ನು ಭೇಟಿ ಮಾಡಲು ಶಾಸಕ ಹ್ಯಾರೀಸ್ ಮಲ್ಯ ಆಸ್ಪತ್ರೆಗೆ ಮತ್ತೆ ಭೇಟಿ ನೀಡಿದ್ದಾರೆ. ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ವಿದ್ವತ್ ತಂದೆ ಲೋಕನಾಥ್ ಜೊತೆ ಶಾಸಕ ಹ್ಯಾರಿಸ್ ಸಂಧಾನದ ಬೇಡಿಕೆ ಇಟ್ಟಿದ್ದಾರೆನ್ನಲಾಗಿದೆ. ಲೋಕನಾಥ್’ರನ್ನ ಬಳಿಗೆ ಕರೆದು ಶಾಸಕ ಹ್ಯಾರಿಸ್ ಮಾತನಾಡಿದ್ದಾರೆ. ಸಂಧಾನಕ್ಕೆ ಒಪ್ಪಿಕೊಳ್ಳುವಂತೆ ವಿದ್ವತ್ ತಂದೆಗೆ ಶಾಸಕ ಹ್ಯಾರಿಸ್ ಮನವಿ ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ವಿದ್ವತ್ ತಂದೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.