Asianet Suvarna News Asianet Suvarna News

ಬಿ.ಸಿ ಪಾಟೀಲ್ ಮುಂದಿನ ನಿರ್ಧಾರವೇನು..?

ಸಚಿವ ಸ್ಥಾನ ಕೈ ತಪ್ಪಿರುವುದು ಬೇಸರ ತರಿಸಿದೆ. ಇನ್ನು ಬೆಂಗಳೂರಿನ ನಾಯಕರಿಗೆ ಮಂಡಿ ಊರಿ ಕೂರುವ ಕಾಲ ಮುಗಿತು. ನಾವು ಉತ್ತರ ಕರ್ನಾಟಕದವರ ಗತ್ತು ಏನು ಎಂಬುದನ್ನು  ನನ್ನ ಹೈಕಮಾಂಡ್ ಆಗಿರುವ ತಾಲೂಕಿನ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಿಸಿ ಪಾಟೀಲ್ ತನ್ನ ಅಸಮಾಧಾನ ಹೊರಹಾಕಿದ್ದಾರೆ.

MLA BC Patil Upset Over Cabinet Formation

ಹಿರೇಕೆರೂರು: ಸಚಿವ ಸ್ಥಾನ ಕೈ ತಪ್ಪಿರುವುದು ಬೇಸರ ತರಿಸಿದೆ. ಇನ್ನು ಬೆಂಗಳೂರಿನ ನಾಯಕರಿಗೆ ಮಂಡಿ ಊರಿ ಕೂರುವ ಕಾಲ ಮುಗಿತು. ನಾವು ಉತ್ತರ ಕರ್ನಾಟಕದವರ ಗತ್ತು ಏನು ಎಂಬುದನ್ನು ಸೋಮವಾರ ನನ್ನ ಹೈಕಮಾಂಡ್ ಆಗಿರುವ ತಾಲೂಕಿನ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಹೀಗೆ ಕಡ್ಡಿ ಮುರಿದಂತೆ ಹೇಳಿದವರು ಹಾವೇರಿ ಜಿಲ್ಲೆಯ ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಬಿ.ಸಿ.ಪಾಟೀಲ್.

ನಗರದಲ್ಲಿ ಗುರುವಾರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ ಏಕೈಕ ಶಾಸಕ ನಾನು. ಹಾವೇರಿ, ಗದಗ, ಧಾರವಾಡ ಭಾಗದ ಏಕೈಕ ಲಿಂಗಾಯತ ಕಾಂಗ್ರೆಸ್ ಶಾಸಕ. ಹೀಗಾಗಿ, ಸಚಿವ ಸ್ಥಾನ ಸಿಗುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಅದು ಸುಳ್ಳಾಗಿದೆ. ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಇಷ್ಟು ದಿನ ಅವರು ಹೇಳಿದ ಹಾಗೆ ಕೇಳಿ, ಕೇಳಿ ಸಾಕಾಗಿದೆ ಎಂದರು. 

Follow Us:
Download App:
  • android
  • ios