ಐಟಿ‌ ದಾಳಿ‌ ಖಂಡಿಸಿದ ವಿನಯ ಕುಲಕರ್ಣಿ ಮೋದಿ ಹಿಟ್ಲರ್ ನಂತೆ‌ ವರ್ತಿಸುತ್ತಿದ್ದಾರೆ. ಮೋದಿ ಆಡಳಿತ ನೋಡಿದರೆ ಹಿಟ್ಲರ್ ನೆನೆಪಾಗುತ್ತಾರೆ ಎಂದು ಹೇಳಿದ್ದಾರೆ.  

ಧಾರವಾಡ (ಮಾ. 22): ಐಟಿ‌ ದಾಳಿ‌ ಖಂಡಿಸಿದ ವಿನಯ ಕುಲಕರ್ಣಿ ಮೋದಿ ಹಿಟ್ಲರ್'ನಂತೆ‌ ವರ್ತಿಸುತ್ತಿದ್ದಾರೆ. ಮೋದಿ ಆಡಳಿತ ನೋಡಿದರೆ ಹಿಟ್ಲರ್ ನೆನೆಪಾಗುತ್ತಾರೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲರನ್ನೂ ಭಯದ ವಾತಾವರಣದಲ್ಲಿ ಇಡಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಐಟಿ ಇಲಾಖೆ ಬಳಸಿಕೊಂಡು ಕಳೆದ 7-8 ತಿಂಗಳಿನಿಂದ ಹೆದರಿಸುವ ಪ್ರಯತ್ನ ಮಾಡುತ್ತಿದೆ. ಇದನ್ನು ‌ನೋಡಿದರೆ ಬಿಜೆಪಿ ನಾಯಕರು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಈ ಕುರಿತು ಪಕ್ಷದ ಮಟ್ಟದಲ್ಲಿ ಸಾಕಷ್ಟು ಚರ್ಚೆ ಪ್ರಾರಂಭವಾಗಿದ್ದು ಗಂಭೀರ ‌ಚಿಂತನೆ ನಡೆಸಲಾಗುವುದು ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ ಲಿಂಗಾಯತ ಧರ್ಮದ ವಿಚಾರವಾಗಿ ಮಾತನಾಡುತ್ತಾ, ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ಕಳೆದ ಬಾರಿ ಯಾವುದೇ ದಾಖಲೆ ಇಲ್ಲದೇ ಕಳುಹಿಸಲಾಗಿತ್ತು. ಈ ಬಾರಿ ಸಾಕಷ್ಟು ದಾಖಲೆ‌ ನೀಡಲಾಗಿದೆ. ಈ ಬಾರಿ ತಿರಸ್ಕೃತ ವಾಗದಂತೆ ದಾಖಲೆ ನೀಡಲಾಗಿದೆ. ಮಾನ್ಯತೆ ದೊರೆಯುವ ನಿರೀಕ್ಷೆ ಇದೆ ಎಂದಿದ್ದಾರೆ.