Asianet Suvarna News Asianet Suvarna News

ಕೆರೆ ಅತಿಕ್ರಮಣ ಆರೋಪ; ಸಚಿವ ಟಿಬಿ ಜಯಚಂದ್ರ ವಿರುದ್ಧ ದೂರು

ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳದಲ್ಲಿ 24 ಎಕರೆ 12 ಗುಂಟೆಯಷ್ಟು ವಿಸ್ತೀರ್ಣವಿರುವ ಸರಕಾರಿ ಕೆರೆಯಲ್ಲಿ 15ಗುಂಟೆಯಷ್ಟು ಜಮೀನನ್ನು ಅತಿಕ್ರಮಣ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಹಾಸ್ಟೆಲ್ ನಿರ್ಮಿಸಲೆಂದು 15 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿದೆ.

minister tb jayachandra faces land grabbing allegations

ಬೆಂಗಳೂರು(ಆ. 01): ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ಭೂಕಬಳಿಕೆಯ ಆರೋಪ ಕೇಳಿಬಂದಿದೆ. ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಟ್ರಸ್ಟ್ ಮೂಲಕ ಸರಕಾರಿ ಕೆರೆ ಅತಿಕ್ರಮಣ ಮಾಡಿದ್ದಾರೆಂದು ಜಯಚಂದ್ರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡರು ದೂರು ದಾಖಲಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳದಲ್ಲಿ 24 ಎಕರೆ 12 ಗುಂಟೆಯಷ್ಟು ವಿಸ್ತೀರ್ಣವಿರುವ ಸರಕಾರಿ ಕೆರೆಯಲ್ಲಿ 15ಗುಂಟೆಯಷ್ಟು ಜಮೀನನ್ನು ಅತಿಕ್ರಮಣ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಹಾಸ್ಟೆಲ್ ನಿರ್ಮಿಸಲೆಂದು 15 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿದೆ.

ಒತ್ತುವರಿ ಆರೋಪ ಎದುರಿಸುತ್ತಿರುವ ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಟ್ರಸ್ಟ್'ನಲ್ಲಿ ಟಿಬಿ ಜಯಚಂದ್ರ ಅವರು ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ.

Follow Us:
Download App:
  • android
  • ios