ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಸಂಕಷ್ಟ ಶುರುವಾಗಿದೆ.  ಕೆಲ ಸಚಿವರಿಗೆ ಐಟಿ, ಇಡಿ ಹಾಗೂ ಸಿಬಿಐ ಭೂತ ಕಾಡಲಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಇದು ಸಿದ್ದರಾಯಯ್ಯ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಡಿಕೆಶಿಗೆ ಇಡಿ ಭಯವಾದರೆ  ಕೆ.ಜೆ.ಜಾರ್ಜ್​'ಗೆ ಸಿಬಿಐ ಭಯ ಎದುರಾಗಿದೆ.  ಜಾರ್ಜ್​​ಗೆ ಮುಳುವಾಗಲಿದೆ ಡಿವೈಎಸ್​​​ಪಿ ಗಣಪತಿ ಪ್ರಕರಣ ಎನ್ನಲಾಗುತ್ತಿದೆ.

ಬೆಂಗಳೂರು (ಫೆ.10): ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಸಂಕಷ್ಟ ಶುರುವಾಗಿದೆ. ಕೆಲ ಸಚಿವರಿಗೆ ಐಟಿ, ಇಡಿ ಹಾಗೂ ಸಿಬಿಐ ಭೂತ ಕಾಡಲಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಇದು ಸಿದ್ದರಾಯಯ್ಯ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಡಿಕೆಶಿಗೆ ಇಡಿ ಭಯವಾದರೆ ಕೆ.ಜೆ.ಜಾರ್ಜ್​'ಗೆ ಸಿಬಿಐ ಭಯ ಎದುರಾಗಿದೆ. ಜಾರ್ಜ್​​ಗೆ ಮುಳುವಾಗಲಿದೆ ಡಿವೈಎಸ್​​​ಪಿ ಗಣಪತಿ ಪ್ರಕರಣ ಎನ್ನಲಾಗುತ್ತಿದೆ.

ತೀವ್ರಗೊಂಡಿದೆ ಡಿವೈಎಸ್​ಪಿ ಗಣಪತಿ ಕೇಸ್

ಡಿವೈಎಸ್​ಪಿ ಗಣಪತಿ ಕೇಸಿನ ಸಂಪೂರ್ಣ ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕಿದ್ದಾರೆ. ಎಫ್'​​​ಐಆರ್​ ದಾಖಲಿಸಿ ತನಿಖೆ ನಡೆಸಿದ್ದ ಅಧಿಕಾರಿಗಳ ವಿಚಾರಣೆ ಮುಕ್ತಾಯಗೊಂಡಿದೆ. ನ್ಯಾ.ಕೇಶವ ನಾರಾಯಣ್​​ ಆಯೋಗ ಹಾಗೂ ಸಿಬಿಐ ಬಿ ರಿಪೋರ್ಟ್​​​ ಪರಿಶೀಲನೆ ಕೂಡಾ ಮುಕ್ತಾಯವಾಗಿದೆ.

ಜಾರ್ಜ್​​ ಬಂಧನಕ್ಕೆ ಮೂಹುರ್ತ ಫಿಕ್ಸ್​...!

ಗಣಪತಿ ಪತ್ನಿ ಪವನಾ, ಪುತ್ರ ನೇಹಾಲ್​​ ಸೇರಿ ಕುಟುಂಬಸ್ಥರ ಹೇಳಿಕೆಯನ್ನು ಸಿಬಿಐ ಪಡೆದಿದೆ. ಗಣಪತಿ ಸೇವಾವಧಿಯಲ್ಲಿ ಜಾರ್ಜ್ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ಪ್ರಮುಖ ಆರೋಪಿಗಳಾದ ಕೆ.ಜೆ.ಜಾರ್ಜ್​​, ಪ್ರಣಬ್​ ಮೊಹಂತಿ ಹಾಗೂ ಎ.ಎಂ ಪ್ರಸಾದ್​'ಗೆ ನೋಟಿಸ್​ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಿದ್ದಾರೆ. ಫೆಬ್ರವರಿ ಅಂತ್ಯದೊಳಗೆ ಸಚಿವ ಕೆ.ಜೆ. ಜಾರ್ಜ್​​ಗೆ ಸಂಕಷ್ಟ ಎದುರಾಗಲಿದೆ. ಎಲ್ಲಾ ಸಾಕ್ಷ್ಯಗಳನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.