ಸಚಿವ ಸ್ಥಾನದಲ್ಲಿ ಜಯಮಾಲಾ ಸೇಫ್ ಆಗಿದ್ದು ಹೇಗೆ..?
ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಡಾ. ಜಯಮಾಲಾ ಅವರನ್ನು ಸಂಪುಟದಿದ ಕೈ ಬಿಡುವ ಬಗ್ಗೆ ತೀವ್ರ ಚರ್ಚೆಯಾದರೂ ಸಂಪುಟ ವಿಸ್ತರಣೆ ವೇಳೆ ಜಯಮಾಲಾ ಬಚಾವಾಗಿದ್ದಾರೆ.
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರಾದ ಡಾ. ಜಯಮಾಲಾ ಅವರನ್ನು ಸಂಪುಟದಿದ ಕೈ ಬಿಡುವ ಬಗ್ಗೆ ತೀವ್ರ ಚರ್ಚೆಯಾದರೂ ಸಂಪುಟ ವಿಸ್ತರಣೆ ವೇಳೆ ಜಯಮಾಲಾ ಬಚಾವಾಗಿದ್ದಾರೆ.
ಜಯಮಾಲಾ ಅವರಿಗೆ ಸಚಿವ ಸ್ಥಾನ ದೊರೆತಾಗಲೇ ಕಾಂಗ್ರೆಸ್ನ ಹಲವರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಲಕ್ಷ್ಮೇ ಹೆಬ್ಬಾಳ್ಕರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಶಾಸಕಿಯೊಬ್ಬರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಜಯಮಾಲಾ ಅವರನ್ನು ಕೈಬಿಡಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಜಯಾಮಾಲಾ ಅವರನ್ನು ಸಂಪುಟದಿಂದ ಕೈಬಿಟ್ಟು ಅವರ ಬದಲಿಗೆ ಲಕ್ಷ್ಮೇ ಹೆಬ್ಬಾಳಕರ್ ಅಥವಾ ಅಂಜಲಿ ನಿಂಬಾಳ್ಕರ್ ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಸಂಘಟಿತ ಪ್ರಯತ್ನದ ಫಲವಾಗಿ ಜಯಮಾಲಾ ಅವರು ಖಾತೆ ಉಳಿದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.