ಮನೋಹರ್ ಪರ್ರಿಕರ್ ಸ್ಥಿತಿ ಚಿಂತಾಜನಕ
ಮನಸ್ಸಿದ್ದರೆ ಯಾವುದೇ ಕಾಯಿಲೆ ಬೇಕಾದರೂ ಗೆಲ್ಲಬಹುದು- ಮನೋಹರ್ ಪರ್ರಿಕರ್
ಪಣಜಿ[ಫೆ.05]: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಸೋಮವಾರ ಸಂದೇಶವೊಂದನ್ನು ನೀಡಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್, ಮನಸ್ಸಿದ್ದರೆ ಯಾವುದೇ ಕಾಯಿಲೆ ಬೇಕಾದರೂ ಗೆಲ್ಲಬಹುದು ಎಂದು ಟ್ವೀಟ್ ಮಾಡಿದ್ದಾರೆ.
Human mind can overcome any disease. #WorldCancerDay
— Manohar Parrikar (@manoharparrikar) February 4, 2019
ಹಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿರುವ ಪರ್ರಿಕರ್ ಸದ್ಯ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದಲೇ ಟ್ವೀಟ್ ಮಾಡಿದ್ದಾರೆ. ಈ ನಡುವೆ, ಪರ್ರಿಕರ್ ಅವರಿಗೆ ಆರೋಗ್ಯ ಉತ್ತಮವಾಗಿಲ್ಲ. ದೇವರ ಆಶೀರ್ವಾದದಿಂದ ಅವರು ಬದುಕಿದ್ದಾರೆ. ಅಧಿಕಾರದಿಂದ ಅವರು ಕೆಳಗಿಳಿದರೆ ಅಥವಾ ಅವರಿಗೆ ಏನಾದರೂ ಆದರೆ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಉಪಸ್ಪೀಕರ್ ಮೈಕಲ್ ಲೋಬೋ ತಿಳಿಸಿದ್ದಾರೆ.