ಗಾಂಜಾ ವ್ಯಸನ ತ್ಯಜಿಸುವಂತೆ ಹಿತವಚನ ಹೇಳಿದ್ದಕ್ಕೆ ಆ ಪ್ರದೇಶದ ಯುವಕರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಗೊಂಡ 58ರ ಹರೆಯದ ತಾರಾನಾಥ್ ಯಾದವ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿ ಬಸ್ತಿಪಡ್ಪು ಎಂಬಲ್ಲಿ ಈ ಘಟನೆ ನಡೆದಿದೆ. ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬೆಡ್​ರೂಮ್​ನೊಳಗೆ ವ್ಯಾಪಿಸುತ್ತಿದ್ದಂತೆಯೇ ಪತ್ನಿ ವಿದ್ಯಾ ಸಮಯಪ್ರಜ್ಞೆ ಮೆರೆದು ಪತಿಯ ಜೊತೆ ಪುತ್ರ 10 ವರ್ಷದ ಮಿಥುನ್​ ಅವರನ್ನು ರಕ್ಷಿಸಿದ್ದಾರೆ.

ಮಂಗಳೂರು(ಅ.29): ಕಿಟಕಿ ಮೂಲಕ ಪೆಟ್ರೋಲ್ ಎಸೆದು ಬೆಂಕಿ ಇಟ್ಟು ಮನೆಯವರನ್ನ ಕೊಲ್ಲಲು ಯತ್ನಿಸಿರುವ ಘಟನೆ ಮಂಗಳೂರಿನ ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯ ಯಜಮಾನನಿಗೆ ಸುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪತ್ನಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಾಂಜಾ ವ್ಯಸನ ತ್ಯಜಿಸುವಂತೆ ಹಿತವಚನ ಹೇಳಿದ್ದಕ್ಕೆ ಆ ಪ್ರದೇಶದ ಯುವಕರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಗಾಯಗೊಂಡ 58ರ ಹರೆಯದ ತಾರಾನಾಥ್ ಯಾದವ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಉಳ್ಳಾಲ ಠಾಣಾ ವ್ಯಾಪ್ತಿ ಬಸ್ತಿಪಡ್ಪು ಎಂಬಲ್ಲಿ ಈ ಘಟನೆ ನಡೆದಿದೆ. ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಬೆಡ್​ರೂಮ್​ನೊಳಗೆ ವ್ಯಾಪಿಸುತ್ತಿದ್ದಂತೆಯೇ ಪತ್ನಿ ವಿದ್ಯಾ ಸಮಯಪ್ರಜ್ಞೆ ಮೆರೆದು ಪತಿಯ ಜೊತೆ ಪುತ್ರ 10 ವರ್ಷದ ಮಿಥುನ್​ ಅವರನ್ನು ರಕ್ಷಿಸಿದ್ದಾರೆ.

ಘಟನೆಯಲ್ಲಿ ತಾರಾನಾಥ ಅವರ ಎರಡು ಕೈಗಳಿಗೆ ಸುಟ್ಟ ಗಾಯಗಳಾಗಿದೆ. ಪರಿಸರದಲ್ಲಿ ಹರಡುತ್ತಿರುವ ಗಾಂಜಾ ಹಾವಳಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ನಡೆಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.