'ಅಂಬರೀಶ್ ಒಬ್ಬ ನಾಮರ್ದ'
ಅಂಬಿ ಒಬ್ಬ ನಾಮರ್ದ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯ (ಜ.10): ಅಂಬಿ ಒಬ್ಬ ನಾಮರ್ದ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಮ್ಮ ಕ್ಷೇತ್ರದ ಶಾಸಕ ಒಬ್ಬ ನಾಮರ್ದ ಎಂದರೆ ತಪ್ಪಾಗಲಾರದು. ನಮ್ಮ ಕ್ಷೇತ್ರಕ್ಕೆ ಒಂದೇ ಒಂದೂ ಶುದ್ಧ ನೀರಿನ ಘಟಕ ಆಗಿಲ್ಲ. ಅವರಿಗೆ ಕ್ಷೇತ್ರದ ಜನರೇ ಛೀಮಾರಿ ಹಾಕುವ ಪರಿಸ್ಥಿತಿ ಇದೆ. ಅವರ ವಿರುದ್ಧ ಜಿಲ್ಲಾ ಪಂಚಾಯತ್'ನಲ್ಲೂ ಹೋರಾಟ ಮಾಡಿದ್ದೀವಿ. ಜಿಲ್ಲಾ ಮಂತ್ರಿ ಗಮನಕ್ಕೂ ತಂದಿದ್ದೀವಿ. ಸಾರ್ವಜನಿಕರ ಜೊತೆ ಸೇರಿ ಇನ್ಮುಂದೆ ಹೋರಾಟ ಮಾಡಲಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಯೋಗೇಶ್ ಹೇಳಿದ್ದಾರೆ.