Asianet Suvarna News Asianet Suvarna News

ಮಂಡಸೌರ್ : ಕಾಂಗ್ರೆಸ್ ನಾಯಕ ಸಿಂಧಿಯಾ ಬಂಧನ

ಮಧ್ಯಪ್ರದೇಶದ ಮಂಡಸೌರ್​ನಲ್ಲಿ ನಡೆದ ಗೋಲಿಬಾರ್​ ಘಟನೆ ಮತ್ತೊಂದು ಸಂಘರ್ಷದ ಬೆಳವಣಿಗೆಗೆ ವೇದಿಕೆಯಾಗಿದೆ.

Mandsaur Golibar Jyotiraditya Scindia Detained by Police

ಭೋಪಾಲ್ : ಮಧ್ಯಪ್ರದೇಶದ ಮಂಡಸೌರ್​ನಲ್ಲಿ ನಡೆದ ಗೋಲಿಬಾರ್​ ಘಟನೆ ಮತ್ತೊಂದು ಸಂಘರ್ಷದ ಬೆಳವಣಿಗೆಗೆ ವೇದಿಕೆಯಾಗಿದೆ.

ಗೋಲಿಬಾರ್​ನಲ್ಲಿ ಮೃತಪಟ್ಟಿದ್ದ ರೈತ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದ ಪಟೇಲ್​ ಸಮುದಾಯದ ಮುಖಂಡ ಹಾರ್ದಿಕ್​ ಪಟೇಲ್​ನನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದರು. ಇದೀಗ ಕಾಂಗ್ರೆಸ್​ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾಗೂ ಮಂಡ್​ಸೌರ್​​ ಪ್ರವೇಶಕ್ಕೆ ತಡೆ ನೀಡಲಾಗಿದೆ.

ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಲು ಅವಕಾಶ ನೀಡದ ಪೊಲೀಸರು, ಸಂಸದ ಸಿಂಧಿಯಾರನ್ನು ಬಂಧಿಸಿದ್ದಾರೆ. ಮಂಡಸೌರ್​ನಲ್ಲಿ ಆಕ್ರೋಶದ ಕಿಚ್ಚು ಕಾವೇರಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪ್ರತಿಭಟನೆ ತೀವ್ರಗೊಂಡಿದೆ.

Follow Us:
Download App:
  • android
  • ios