Asianet Suvarna News Asianet Suvarna News

ಮರ್ಮಾಂಗ ಕುಯ್ದು ಕೊಂಡು ವ್ಯಕ್ತಿ ಸಾವು

ಮರ್ಮಾಂಗ ಕುಯ್ದುಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ

Man bleeds to death after cut his penis
Author
Bengaluru, First Published Dec 16, 2018, 8:52 AM IST

ಬೆಂಗಳೂರು :  ಮರ್ಮಾಂಗ ಕುಯ್ದುಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೋಲದೇವನಹಳ್ಳಿ ಶನಿವಾರ ಬೆಳಗ್ಗೆ ನಡೆದಿದೆ.

ಸೋಲದೇವನಹಳ್ಳಿ ಸಮೀಪದ ಕೊಡಗಿ ತಿರುಮಲಾಪುರದ ನಿವಾಸಿ ನಂಜಪ್ಪ (57) ಮೃತರು. ಶನಿವಾರ ಬೆಳಗ್ಗೆ ನಂಜಪ್ಪ ಅವರ ಪುತ್ರ ಹೊಲಕ್ಕೆ ಹೋಗಿದ್ದು, ಮನೆಯಲ್ಲಿ ನಂಜಪ್ಪ ಒಬ್ಬರೇ ಇದ್ದರು. ಮದ್ಯದ ಅಮಲಿನಲ್ಲಿ ಬೆಳಗ್ಗೆ 10.30ರ ಸುಮಾರಿಗೆ ನಂಜಪ್ಪ ತರಕಾರಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ಮರ್ಮಾಂಗ, ವೃಷಣ ಕುಯ್ದುಕೊಂಡಿದ್ದಾರೆ ಎನ್ನಲಾಗಿದೆ. ನಂಜಪ್ಪ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದನ್ನು ಕಂಡು ನೆರೆ ಹೊರೆಯವರು ಪುತ್ರನಿಗೆ ವಿಷಯ ಮುಟ್ಟಿಸಿದ್ದರು.

ಸ್ಥಳಕ್ಕೆ ಬಂದ ನಂಜಪ್ಪ ಅವರ ಪುತ್ರ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಅಷ್ಟೊತ್ತಿಗೆ ನಂಜಪ್ಪ ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಕುಟುಂಬದ ಸದಸ್ಯರು ಯಾರೊಬ್ಬರು ದೂರು ನೀಡಿಲ್ಲ. ಹೀಗಾಗಿ ದೂರು ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios