ಬಶೀರ್ ಸಾವಿಗೆ ಪ್ರತಿಕಾರ : ತಲ್ವಾರ್ ಹಿಡಿದು ತಿರುಗುತ್ತಿದ್ದವ ಬಂಧನ
ಹುಬ್ಬಳ್ಳಿಯಲ್ಲಿ ತಲ್ವಾರ್ ಹಿಡಿದು ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆನಂದ್ ನಗರದಲ್ಲಿ ರಾತ್ರೋ ರಾತ್ರಿ ತಲ್ವಾರ್ ಹಿಡಿದುಕೊಂಡು ಬೈಕ್’ನಲ್ಲಿ ತಿರುಗುತ್ತಿದ್ದ ಎನ್ನಲಾಗಿದೆ. ಈತನ ವರ್ತನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಹುಬ್ಬಳ್ಳಿ (ಜ.08): ಹುಬ್ಬಳ್ಳಿಯಲ್ಲಿ ತಲ್ವಾರ್ ಹಿಡಿದು ತಿರುಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆನಂದ್ ನಗರದಲ್ಲಿ ರಾತ್ರೋ ರಾತ್ರಿ ತಲ್ವಾರ್ ಹಿಡಿದುಕೊಂಡು ಬೈಕ್’ನಲ್ಲಿ ತಿರುಗುತ್ತಿದ್ದ ಎನ್ನಲಾಗಿದೆ. ಈತನ ವರ್ತನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಈತನನ್ನು ಬಂಧಿಸಿದ್ದಾರೆ. ಅಲ್ಲದೇ ಈತನ ಬಳಿ ಇದ್ದ ಪಲ್ಸರ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಜಾವೀದ್ ರಬ್ಬಾನಿ ಎಂದು ಗುರುತಿಸಲಾಗಿದ್ದು, ಬಶೀರ್ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ತಲ್ವಾರ್ ಹಿಡಿದು ತಿರುಗುತ್ತಿದ್ದ ಎನ್ನಲಾಗಿದೆ.