ಆಯ್ತು ಕೆಲಸಕ್ಕೆ ಬನ್ನಿ: ವೈದ್ಯರೆದುರು ಮಂಡಿಯೂರಿದ ಮಮತಾ!
ಸರ್ಕಾರಿ ಕಿರಿಯ ವೈದ್ಯರ ಪ್ರತಿಭಟನೆ ಮುಂದೆ ಮಂಡಿಯೂರಿದ ಮಮತಾ| ಪ್ರತಿಭಟನಾನಿರತರ ಎಲ್ಲಾ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಮಮತಾ| ಹಲ್ಲೆಗೊಳಗಾದ ವೈದ್ಯ ಪರಿಬಾಹಾ ಮುಖ್ಯೋಪಾಧ್ಯಾಯ ಭೇಟಿಗೆ ಮಮತಾ ಸಮ್ಮತಿ| ಪ್ರತಿಭಟನೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ಮನವಿ|
ಕೋಲ್ಕತ್ತಾ(ಜೂ.15): ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಕಿರಿಯ ವೈದ್ಯರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿರುವುದಾಗಿ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
"
West Bengal government: State is fully committed to take necessary steps. State has taken the decision to bear all the expenses of medical treatment of the junior doctor who is admitted at a private hospital. #DoctorsStrikepic.twitter.com/iGpPaCoTNg
— ANI (@ANI) June 15, 2019
ವೈದ್ಯರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿದ್ದು, ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ರಾಜಧಾನಿ ಕೋಲ್ಕತ್ತಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಮಮತಾ, ಹಲ್ಲೆಗೊಳಗಾದ ಕಿರಿಯ ವೈದ್ಯ ಪರಿಬಾಹಾ ಮುಖ್ಯೋಪಾಧ್ಯಾಯ ಅವರನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
West Bengal CM, Mamata Banerjee in Kolkata: State govt is committed towards resuming normal medical services at the soonest. The incident on 10th June was unfortunate. We had continuously tried to reach a solution. pic.twitter.com/qNKTKHRQRR
— ANI (@ANI) June 15, 2019
ಈ ಹಿನ್ನೆಲೆಯಲ್ಲಿ ಕೂಡಲೇ ಪ್ರತಿಭಟನೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರತಿಭಟನಾ ನಿರತ ಕಿರಿಯ ವೈದ್ಯರಿಗೆ ಪ.ಬಂಗಾಳ ಸಿಎಂ ಮನವಿ ಮಾಡಿದ್ದಾರೆ. ಅಲ್ಲದೇ ಕಿರಿಯ ವೈದ್ಯರ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದಾಗಿ ಮಮತಾ ಭರವಸೆ ನೀಡಿದ್ದಾರೆ.
West Bengal CM Mamata Banerjee: I appeal to all doctors to resume work as thousands of people are awaiting medical treatment. #DoctorStrikepic.twitter.com/0v8rDxuGFN
— ANI (@ANI) June 15, 2019
ರೋಗಿಯ ಸಾವಿನ ಹಿನ್ನೆಲೆಯಲ್ಲಿ ಆತನ ಸಂಬಂಧಿಕರು ವೈದ್ಯ ಪರಿಬಾಹಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ, ಸರ್ಕಾರಿ ಕಿರಿಯ ವೈದ್ಯರು ಕಳೆದ 5 ದಿನಗಳಿಂದ ಪ.ಬಂಗಾಳದಲ್ಲಿ ಭಾರೀ ಪ್ರತಿಭಟನೆ ನಡೆಸಸುತ್ತಿದ್ದಾರೆ.