ಪಂಚಭೂತಗಳಲ್ಲಿ ಲೀನರಾದ ಮೇಜರ್ ಅಕ್ಷಯ್
ಬೆಳಗ್ಗೆ ಅಕ್ಷಯ್ ಕುಮಾರ್ ಪಾರ್ಥಿವ್ ಶರೀರವನ್ನು . ಯಲಹಂಕದ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ತರಲಾಯ್ತು. ಮೇಜರ್ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ 12.30ರ ವರೆಗೂ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂದನೆ ಸಲ್ಲಿಸಲಾಯ್ತು.
ಬೆಂಗಳೂರು (ಡಿ.01): ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಕುಮಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿತು.
ಬೆಳಗ್ಗೆ ಅಕ್ಷಯ್ ಕುಮಾರ್ ಪಾರ್ಥಿವ್ ಶರೀರವನ್ನು . ಯಲಹಂಕದ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ತರಲಾಯ್ತು. ಮೇಜರ್ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ 12.30ರ ವರೆಗೂ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂದನೆ ಸಲ್ಲಿಸಲಾಯ್ತು.
ಅಲ್ಲಿಂದ ಮೆರವಣಿಗೆಯಲ್ಲಿ ಯಲಹಂಕದ ಅಕ್ಷಯ್ ಕುಮಾರ್ ಅವರ ಅಪಾರ್ಟ್ಮೆಂಟ್ಗೆ ತರಲಾಯ್ತು. ಅಲ್ಲಿ ಸಂಜೆ ಯಲಹಂಕದ ಜೇಡ್ ಗಾರ್ಡನ್ ಗೇಟ್ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮೆರವಣಿಗೆ ಮೂಲಕ ಹೆಬ್ಬಾಳದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಅಂತ್ಯಕ್ರಿಯೆಯಲ್ಲಿ ರಾಜಕೀಯ ಗಣ್ಯರು ಸೇರಿದಂತೆ ಅನೇಕ ಮಂದಿ ಪಾಲ್ಗೊಂಡು ಅಂತಿನ ನಮನ ಸಲ್ಲಿಸಿದರು.