Asianet Suvarna News Asianet Suvarna News

ಮನೆ ಬಿಟ್ಟು ಓಡಿ ಬಂದು ಮದುವೆಯಾದ ಪ್ರೇಮಿಗಳಿಗೆ ಪೋಷಕರಿಂದ ಬೆದರಿಕೆ

Lovers Threatened By The Parents

ಬೆಂಗಳೂರು(ಅ.03): ಅವರದು ಜಾತಿಯನ್ನ ಮೀರಿದ ಪ್ರೀತಿ. ಅಷ್ಟೂ ದಿನ ಪ್ರೀತಿಸಿದವರು ಈಗ ಸಪ್ತಪದಿ ತುಳಿದಿದ್ದಾರೆ. ಆದರೆ ಪ್ರಣಯಪಕ್ಷಿಗಳಿಗೆ ತೊಡಕಾಗಿರುವುದು ಅವರ ಮನೆಯವರೆ. ಹೌದು​ ದೊಡ್ಡವರ ಬೆದರಿಕೆಗೆ ಹೆದರಿದ ಆ ಪ್ರೇಮಿಗಳಿಗೆ ಈಗ ಜೀವ ಭಯ.

ಎಲ್ಲಾ ಪ್ರೇಮಿಗಳಂತೆ ಈ ಪ್ರೇಮಿಗಳು ಕೇಳುತ್ತಿರುವ ಪ್ರಶ್ನೆ 'ಪ್ರೀತ್ಸೋದ್​ ತಪ್ಪಾ?' ಎಂದು.​ ಪೋಷಕರನ್ನು ಎದುರು ಹಾಕಿಕೊಂಡು ಮದ್ವೆಯಾದವರಿಗೆ ಈಗ ಅದೇ ಹೆತ್ತವರಿಂದ ಸಾವಿನ ಭಯ ಕಾಡುತ್ತಿದೆ. ಅಂದ ಹಾಗೆ ಅವರಿಬ್ಬರ ಪ್ರೀತಿಗೆ ತೊಡಕಾಗಿರುವುದು ಜಾತಿ. ಕಾಮಾಕ್ಷಿಪಾಳ್ಯ ನಿವಾಸಿ ಅನಿಲ್​ ಮತ್ತು ಬಸವೇಶ್ವರ ನಗರದ ಕಾಮಾಕ್ಷಿ, ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರು ಒಪ್ಪದ ಕಾರಣ ಆಗಸ್ಟ್​  24ರಂದು ಮನೆ ಬಿಟ್ಟು ಓಡಿ ಹೋದವರು ಮಾಗಡಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಅನಿಲ್​ ವೃತ್ತಿಯಲ್ಲಿ ಪ್ಲಂಬರ್​​. ಕಾಮಾಕ್ಷಿ ಕಾಲೇಜು ಓದುತ್ತಿರುವಾಗ ಪ್ರೀತಿಯಾಗಿದ್ದು ಈ ವಿಷಯ ಮನೆಯಲ್ಲಿ ಗೊತ್ತಾಗಿದೆ. ತಂದೆ ನಾರಾಯಣ ನಿವೃತ್ತ ಪೊಲೀಸ್. ಈ ಹಿಂದೆ ಕಾಮಾಕ್ಷಿ ಅಣ್ಣಂದಿರು ಅನಿಲ್​ ಮೇಲೆ ಹಲ್ಲೆ ಮಾಡಿದ್ದರಂತೆ. ಮೈನರ್ ಆಗಿದ್ದಾಗ ಎಲ್ಲವನ್ನೂ ಸಹಿಸಿಕೊಂಡಿದ್ದ ಕಾಮಾಕ್ಷಿ ಈಗ ಮೇಜರ್. ಹೀಗಾಗಿ ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಇದರಿಂದ ಕಾಮಾಕ್ಷಿ ಪೋಷಕರ ಬೆದರಿಕೆ ಕಾರಣಕ್ಕೆ ಅಂಬೇಡ್ಕರ್ ಸೇನೆ ನವದಂಪತಿಯ ಸಹಾಯಕ್ಕೆ ಮುಂದಾಗಿದೆ.

ಒಟ್ಟಿನಲ್ಲಿ ಮನೆ ಬಿಟ್ಟು ಮದುವೆಯಾಗಿರುವ ಈ ನವಜೋಡಿಗಳಿಗೆ ಪೋಷಕರೇ ವಿಲನ್​ಗಳಾಗಿದ್ದು ಇವರಿಗೆ ಸೂಕ್ತ ರಕ್ಷಣೆ ಬೇಕಿದೆ.

Latest Videos
Follow Us:
Download App:
  • android
  • ios