ಸರ್ಕಾರದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ ಲೋಕಾಯುಕ್ತ
ಲೋಕಾಯುಕ್ತದಲ್ಲಿ ಪದೇ ಪದೇ ಸರ್ಕಾರದ ಪ್ರತಿನಿಧಿಗಳು ಪದೆಪದೇ ಮೂಗು ತೂರಿಸುವುರ ನಡವಳಿಕೆಯಿಂದ ಕಿರಿಕಿರಿಯಾಗಿದ್ದು,ಈ ಹಿನ್ನಲೆಯಲ್ಲಿ ವಿಧಾನ ಸಭಾಧ್ಯಕ್ಷರಾದ ಕೆ.ಬಿ ಕೋಳಿವಾಡ, ಡಿಪಿಎಆರ್ ಸೆಕ್ರೆಟರಿ, ವಿಧಾನಸಭೆ ಸೆಕ್ರೆಟರಿ ಸೇರಿ ಹಲವರ ವಿರುದ್ಧ ರಿಜಿಸ್ಟ್ರಾರ್ ಅವರು ರಿಟ್ ಸಲ್ಲಿಸಿದ್ದಾರೆ
ಬೆಂಗಳೂರು(ಜ.16): ಸರ್ಕಾರದ ಕಿರಿಕಿರಿಯಿಂದ ಬೇಸತ್ತ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರ ನೀಡಿದ ಅನುದಾನದ ಬಗ್ಗೆ ಕೆಲ ಶಾಸಕರು ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತದಲ್ಲಿ ಪದೇ ಪದೇ ಸರ್ಕಾರದ ಪ್ರತಿನಿಧಿಗಳು ಪದೆಪದೇ ಮೂಗು ತೂರಿಸುವುರ ನಡವಳಿಕೆಯಿಂದ ಕಿರಿಕಿರಿಯಾಗಿದ್ದು,ಈ ಹಿನ್ನಲೆಯಲ್ಲಿ ವಿಧಾನ ಸಭಾಧ್ಯಕ್ಷರಾದ ಕೆ.ಬಿ ಕೋಳಿವಾಡ, ಡಿಪಿಎಆರ್ ಸೆಕ್ರೆಟರಿ, ವಿಧಾನಸಭೆ ಸೆಕ್ರೆಟರಿ ಸೇರಿ ಹಲವರ ವಿರುದ್ಧ ರಿಜಿಸ್ಟ್ರಾರ್ ಅವರು ರಿಟ್ ಸಲ್ಲಿಸಿದ್ದಾರೆ. ನಾಳೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.