ಸದ್ಯದಲ್ಲೇ ಮತ್ತೆ ಸೇನೆ ಸೇರಲಿದ್ದಾರೆ ಶ್ರೀಕಾಂತ್ ಪುರೋಹಿತ್
ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಕೆಲದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಲೆಫ್ಟಿನೆಂಟ್ ಕಲೋನಿಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಸದ್ಯದಲ್ಲೇ ಸೇನೆಯನ್ನು ಸೇರಲಿದ್ದಾರೆ. 9 ವರ್ಷಗಳ ನಂತರ ಮತ್ತೆ ಸೇನೆ ಸೇರಲು ಉತ್ಸುಕನಾಗಿದ್ದೇನೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಸೇನಾ ಸಮವಸ್ತ್ರವನ್ನು ಧರಿಸಿರುವ ಮಿಂಚುತ್ತಿರುವ ಫೊಟೋಗಳು ಲಭ್ಯವಾಗಿವೆ.
ನವದೆಹಲಿ (ಆ.30): ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಕೆಲದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಲೆಫ್ಟಿನೆಂಟ್ ಕಲೋನಿಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಸದ್ಯದಲ್ಲೇ ಸೇನೆಯನ್ನು ಸೇರಲಿದ್ದಾರೆ. 9 ವರ್ಷಗಳ ನಂತರ ಮತ್ತೆ ಸೇನೆ ಸೇರಲು ಉತ್ಸುಕನಾಗಿದ್ದೇನೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಸೇನಾ ಸಮವಸ್ತ್ರವನ್ನು ಧರಿಸಿರುವ ಮಿಂಚುತ್ತಿರುವ ಫೊಟೋಗಳು ಲಭ್ಯವಾಗಿವೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಪುರೋಹಿತ್’ರವರನ್ನು ಸೇನಾ ತುಕಡಿಗೆ ಸೇರಿಸಿಕೊಳ್ಳಲಾಗುವುದು. ಆದರೆ ಯಾವುದೇ ಕರ್ತವ್ಯವನ್ನು ನಿರ್ವಹಿಸಿಲು ವಹಿಸುವುದಿಲ್ಲ. ಸುಪ್ರೀಂಕೋರ್ಟ್ ನೀಡಿದ ಶರತ್ತು ಬದ್ಧ ಜಾಮೀನಿನ ಪ್ರತಿಯನ್ನು ಅಧ್ಯಯನ ಮಾಡಿದ ಬಳಿಕ ಕೆಲವು ನಿರ್ದಿಷ್ಟ ನಿಬಂಧನೆಗಳೊಂದಿಗೆ ಪುರೋಹಿತ್’ರವರನ್ನು ಪುನಃ ಸೇರಿಸಿಕೊಳ್ಳಲಾಗುವುದು ಎಂದು ಸೇನೆ ಹೇಳಿದೆ.