ಉರಿ ದಾಳಿಯ ಹಿಂದೆ ಲಷ್ಕರೆ ತೊಯ್ಬಾ ಕೈವಾಡ: ಎನ್’ಐಏ
ಕಳೆದ ವರ್ಷ ಸೆ.18ರ ನಸುಕಿನ ವೇಳೆ ಉರಿಯಲ್ಲಿದ್ದ ಸೇನಾ ಶಿಬಿರದ ಮೇಲೆ ನಾಲ್ಕು ಮಂದಿ ಉರರು ದಾಳಿ ನಡೆಸಿದ್ದರು. ದಾಳಿಯಲ್ಲಿ 19 ಮಂದಿ ಯೋಧರು ಹುತಾತ್ಮರಾಗಿದ್ದರು.
ನವದೆಹಲಿ (ಜ.19): 19 ಮಂದಿ ಯೋಧರನ್ನು ಬಲಿಪಡೆದುಕೊಂಡ ಉರಿ ದಾಳಿಯ ಹಿಂದೆ ಜೈಶೆ ಮೊಹಮ್ಮದ್ ಕೈವಾಡವಿಲ್ಲ ಬದಲಾಗಿ ಲಷ್ಕರೆ ತೊಯ್ಬಾ ಕೈವಾಡವಿದೆಯೆಂದು ರಾಷ್ಟ್ರೀಯ ತನಿಖಾ ದಳ (ಎನ್’ಐಏ) ಹೇಳಿದೆ.
ಆದರೆ, ಇಬ್ಬರು ಸೇನಾ ಅಧಿಕಾರಿಗಳನ್ನು ಹಾಗೂ 5 ಯೋಧರನ್ನು ಬಲಿಪಡೆದ ನಾಗ್ರೋಟಾ ದಾಳಿಯ ಹಿಂದೆ ಜೈಶ್ ಕೈವಾಡವಿದೆ ಎಂದು ಎನ್’ಐಏ ಹೇಳಿದೆ.
ಉರಿ ದಾಳಿಯನ್ನು ಜೈಶ್ ಸಂಘಟನೆಯು ನಡೆಸಿದೆಯೆಂದು ಈ ಮುಂಚೆ ಆರೋಪಿಸಲಾಗಿತ್ತು.
ಕಳೆದ ವರ್ಷ ಸೆ.18ರ ನಸುಕಿನ ವೇಳೆ ಉರಿಯಲ್ಲಿದ್ದ ಸೇನಾ ಶಿಬಿರದ ಮೇಲೆ ನಾಲ್ಕು ಮಂದಿ ಉರರು ದಾಳಿ ನಡೆಸಿದ್ದರು. ದಾಳಿಯಲ್ಲಿ 19 ಮಂದಿ ಯೋಧರು ಹುತಾತ್ಮರಾಗಿದ್ದರು.