ಲಕ್ಕಸಂದ್ರ ವಾರ್ಡ್ ಕಾರ್ಪೋರೇಟರ್ ಮಹೇಶ್ ಬಾಬು ಕಳೆದ ಜುನ್'ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕಾರಣ ಅವರ ಸ್ಥಾನ ತೆರವಾಗಿತ್ತು.

ಬೆಂಗಳೂರು(ನ.3): ಬೃಹತ್ ಬೆಂಗಳೂರು ಪಾಲಿಕೆಯ ಲಕ್ಕಸಂಧ್ರ ವಾರ್ಡ್'ನ ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಫಿಕ್ಸ್ ಮಾಡಿದೆ. ನ.2ರಂದು ಆಯುಕ್ತರು ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 9 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ. 20ರಂದು ಮತದಾನ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ. ಲಕ್ಕಸಂದ್ರ ವಾರ್ಡ್ ಕಾರ್ಪೋರೇಟರ್ ಮಹೇಶ್ ಬಾಬು ಕಳೆದ ಜುನ್'ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕಾರಣ ಅವರ ಸ್ಥಾನ ತೆರವಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred