Asianet Suvarna News Asianet Suvarna News

ಎಸ್'ಟಿಗೆ ಕುರುಬ ಸಮುದಾಯ ಸೇರಿಸಲು ಆಗ್ರಹ

  • ಶ್ರೀಕನಕಗುರುಪೀಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಸಂಘದ ಮುಖಂಡರು ನಡೆಸಿದ ಪೂರ್ವಭಾವಿ ಸಭೆ
  •  ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ
Kuruba community Leaders Demands schedule tribe Tag
Author
Bengaluru, First Published Jul 15, 2018, 10:32 PM IST

ಕೊಪ್ಪಳ[ಜು.15]: ಕುರುಬ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಹಾಲುಮತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿದೆ.

ಕುರುಬರ ಶಕ್ತಿಕೇಂದ್ರ ಶ್ರೀಕನಕಗುರುಪೀಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಸಂಘದ ಪೂರ್ವಭಾವಿ ಸಭೆಯಲ್ಲಿ ಸಮುದಾಯವನ್ನು ಎಸ್ ಟಿಗೆ ಸೇರಿಸುವುದರ ಜೊತೆಗೆ ಹಲವು ನಿರ್ಣಯಗಳನ್ನು ಕೈಗೊಂಡರು.

ಕುರುಬರಿಗೆ ಎಸ್. ಟಿ ಮೀಸಲಾತಿ ಬೇಕು ಎಂಬ ಕೂಗನ್ನು ಸಂವಾದ, ಜನಾಭಿಪ್ರಾಯ ಸಭೆಗಳು, ಸಮಾವೇಶ, ಧರಣಿಗಳ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮುಟ್ಟಿಸಲಾಗಿದೆ. ಆದರೆ ಸಮುದಾಯದ ಕೂಗನ್ನು ಸರ್ಕಾರಗಳು ಇಲ್ಲಿಯವರೆಗೂ ಪರಿಗಣಿಸಿಲ್ಲ. ಇನ್ನಾದರೂ ಸಮುದಾಯದ ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಮುಖಂಡರು ಎಚ್ಚರಿಸಿದರು.

Follow Us:
Download App:
  • android
  • ios