Asianet Suvarna News Asianet Suvarna News

ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್​ನ ಬೃಹತ್​ ಸಮಾವೇಶ ಯಶಸ್ವಿ

ಈ ಪಕ್ಷದಲ್ಲಿ ರಾಜಕೀಯ ಜೀವನ ಆರಂಭವಾಗಿದೆ ಸಾಯೋತನಕ ಈ ಪಕ್ಷದಲ್ಲೇ ಇರುತ್ತೇನೆ

kseeshwarappa royal brigade convetion in haveri

ಹಾವೇರಿ(ಅ.01): ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪನವರಿಗೆ ಸೆಡ್ಡು ಹೊಡೆದಿರುವ  ಈಶ್ವರಪ್ಪನವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ ಸದ್ದು ಮಾಡಿದೆ. ಯಡಿಯೂರಪ್ಪನವರ ಶಕ್ತಿಕೇಂದ್ರ ಅಂತಲೇ ಕರೆಸಿಕೊಳ್ಳುವ ಹಾವೇರಿಯಲ್ಲಿ ಈಶ್ವರಪ್ಪನವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​ನ ಬೃಹತ್​ ಸಮಾವೇಶ ಯಶಸ್ವಿಯಾಗಿದೆ. ನಗರದ ಮುನ್ಸಿಪಲ್​ ಮೈದಾನದಲ್ಲಿ ನಡೆದ ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್​ನ ಬೃಹತ್​ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ  ತಮ್ಮದೇ  ಪಕ್ಷದ ನಾಯಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಮ್ಮದೇ ದಾಟಿಯಲ್ಲಿ ವಾಗ್ದಾಳಿ ನಡೆಸಿದರು.

ಇನ್ನೂ, ಈ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇನೆ. .ಈ ಪಕ್ಷದಲ್ಲಿ ರಾಜಕೀಯ ಜೀವನ ಆರಂಭವಾಗಿದೆ ಸಾಯೋತನಕ ಈ ಪಕ್ಷದಲ್ಲೇ ಇರುತ್ತೇನೆ ಅಂತ ಈಶ್ವರಪ್ಪ ತಮ್ಮ ಬೆಂಬಲಿಗರಿಗೆ  ಮಾತು ಕೊಟ್ಟರು. ಮುಂದಿನ ಜನವರಿ 26ರಂದು ಕೂಡಲ ಸಂಗಮದಲ್ಲಿ  ಸಮಾವೇಶ ನಡೆಸಿ ಲಕ್ಷಾಂತರ ಜನ ಸೇರಿಸುವ ಗುರಿ ಈಶ್ವರಪ್ಪನವರದ್ದಾಗಿದೆ. ಒಟ್ಟಾರೆ ಈಶ್ವರಪ್ಪನವರ ಹಾವೇರಿಯ ಸಂಗೊಳ್ಳಿ ರಾಯಣ್ಣ ಬ್ರಿಗೇಡ್​  ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಲಭಿಸಿದೆ