Asianet Suvarna News Asianet Suvarna News

IMA ವಂಚಕ, ದುಬೈಗೆ ಹಾರಿದ ಮನ್ಸೂರ್‌ಗೆ ಉಬೈದುಲ್ಲಾ ಷರೀಪ್ ಪತ್ರ!

ಐಎಂಎ ಬಹುಕೋಟಿ ವಂಚನೆ ಪ್ರಕರಣ| ಕೆಪಿಸಿಸಿ ಕಾರ್ಯದರ್ಶಿ ಉಬೈದುಲ್ಲಾ ಷರೀಪ್ ನಿಂದ ಮನ್ಸೂರ್ ಗೆ ಪತ್ರ| ಸರ್ಕಾರದ ಮಟ್ಟದಲ್ಲಿ ಕಾನೂನು ಕ್ರಮ ಜರುಗಿದ್ದೇ ಆದಲ್ಲಿ ನಾನು ಜವಾಬ್ದಾರನಲ್ಲ

KPCC Secretary Mohammed Obaidullah Sharif Writes A Letter To IMA Fraud Mansoor Khan
Author
Bangalore, First Published Jun 25, 2019, 3:21 PM IST

ಬೆಂಗಳೂರು[ಜೂ.25]: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈಗೆ ಹಾರಿರುವ ಮನ್ಸೂರ್ ಖಾನ್ ಗೆ ಕೆಪಿಸಿಸಿ ಕಾರ್ಯದರ್ಶಿ ಉಬೈದುಲ್ಲಾ ಷರೀಪ್ ಪತ್ರ ಬರೆದಿದ್ದಾರೆ. ಅಷ್ಟಕ್ಕೂ ಪತ್ರದಲ್ಲೇನಿದೆ? ಇಲ್ಲಿದೆ ವಿವರ

ತಾವು ಬರೆದ ಪತ್ರದಲ್ಲಿ 'ಹೂಡಿಕೆ ಹಣ ಮೇಲೆ ಅಕ್ರಮವಾಗಿ 5 ರಿಂದ 10 ಪರ್ಸೆಂಟ್ ಬಡ್ಡಿ ಕೊಡ್ತೀರೋ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮಿಂದ ಯಾವುದೇ ಉತ್ತರ ಬಂದಿಲ್ಲ. ಬಡ್ಡಿ ಅಲ್ಲ ಲಾಭದ ಹಣ ವಾಪಸ್ ಕೊಡ್ತೀನಿ ಅಂತೀರಿ , ಹಲಾಲ್ ಅಂತೀರಿ, ಕಂಪನಿಯಲ್ಲಿ ಯಾವುದೇ ಅಕ್ರಮ ನಡೀತಿಲ್ಲ ಅಂತೀರಿ, ಬೆಳ್ಳಿ ಬಂಗಾರ ಹೂಡಿಕೆ ಸಹ ಮಾಡಿಸಿಕೊಳ್ತಿದ್ದೀರಿ, ಎಜುಕೇಷನ್ ಇನ್ಸ್​ಟ್ಯೂಟ್ , ಧರ್ಮದ ವಿಚಾರದಲ್ಲಿ ದಾನ ಮಾಡುತ್ತಿದ್ದೀರಿ. ಹಾಗಿದ್ದರೆ ಈ ರೀತಿ ಬ್ಯುಸಿನಸ್ ಮಾಡ್ಬೇಕಾದ್ರೆ ಕಾನೂನು ಪಾಲನೆ ಮಾಡ್ಬೇಕಾಗಿತ್ತು. ಯಾವುದೇ ನಿಯಮವನ್ನು ಪಾಲಿಸಿಲ್ಲ ಏಕೆ?' ಎಂದು ಉಬೈದುಲ್ಲಾ ಷರೀಪ್ ಪ್ರಶ್ನಿಸಿದ್ದಾರೆ.

KPCC Secretary Mohammed Obaidullah Sharif Writes A Letter To IMA Fraud Mansoor Khan

KPCC Secretary Mohammed Obaidullah Sharif Writes A Letter To IMA Fraud Mansoor Khan

ಇಷ್ಟೇ ಅಲ್ಲದೇ '’ನಿಮ್ಮಿಂದ ಕಂಪನಿ ಆಕ್ಟ್ , ಬ್ಯಾಂಕಿಂಗ್ ರೆಗುಲೇಷನ್ ಆಕ್ಟ್ , ಮನಿ ಲ್ಯಾಂಡ್ರಿಂಗ್ ಆಕ್ಟ್ , ರಿಸರ್ವ್​ ಬ್ಯಾಂಕ್ ನಿಯಾಮಾವಳಿಗಳು ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪವಿದೆ. ನಾನು ನಿಮ್ಮ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಮುನ್ನ  ಸರ್ಕಾರದ ಗಮನಕ್ಕೆ ತರುವ ಮುನ್ನ, ನನ್ನ ಪ್ರಶ್ನೆಗಳಿಗೆ ಸ್ಪಷ್ಟನೆ ಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾನೂನು ಕ್ರಮ ಜರುಗಿದ್ದೇ ಆದಲ್ಲಿ ನಾನು ಜವಾಬ್ದಾರನಲ್ಲ' ಎಂದು ಮನ್ಸೂರ್ ಗೆ ಬರೆದಿದ್ದ ಪತ್ರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಉಬೈದುಲ್ಲಾ ಎಚ್ಚರಿಸಿದ್ದಾರೆ

Follow Us:
Download App:
  • android
  • ios