ಇಂಟರ್‌ವ್ಯೂ ಶುರುಮಾಡಿದ ಒಬ್ಬ ಆಂಗ್ಲ ಮಾಧ್ಯಮದ ಒಬ್ಬ ಯುವ ಪತ್ರಕರ್ತೆ ನೌ ಆಯ್ ಆ್ಯಮ್ ವಿತ್ ಮಿಸ್ಟರ್ ಡಿ ಶಿವ ಎಂದು ಹೇಳುತ್ತಲೇ 5 ಟೇಕ್‌ಗಳನ್ನು ತೆಗೆದುಕೊಂಡರು.

ಕಲ್ಲಿದ್ದಲು ದಂಡ ಪಾವತಿಗೆ ಸಂಬಂಧಪಟ್ಟಂತೆ ಇಂಧನ ಸಚಿವ ಡಿ ಕೆ. ಶಿವಕುಮಾರ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಕನ್ನಡ ಮಾಧ್ಯಮಗಳನ್ನು ಸ್ವಲ್ಪ ದೂರ ಇಟ್ಟು ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರ ಜೊತೆ ಬಹಳ ದಿನವಾಯಿತು ಮಾತನಾಡಿಯೇ ಇಲ್ಲವೆಂದು ಹತ್ತಿರ ಕರೆದು ಮಾತನಾಡತೊಡಗಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಟರ್‌ವ್ಯೂ ಶುರುಮಾಡಿದ ಒಬ್ಬ ಆಂಗ್ಲ ಮಾಧ್ಯಮದ ಒಬ್ಬ ಯುವ ಪತ್ರಕರ್ತೆ ನೌ ಆಯ್ ಆ್ಯಮ್ ವಿತ್ ಮಿಸ್ಟರ್ ಡಿ ಶಿವ ಎಂದು ಹೇಳುತ್ತಲೇ 5 ಟೇಕ್‌ಗಳನ್ನು ತೆಗೆದುಕೊಂಡರು. ಡಿ ಕೆ ಶಿವಕುಮಾರ್ ಎಂದು ಹೇಳಲು ಆಕೆಗೆ ಸಾಧ್ಯವಾಗಲಿಲ್ಲ. ಕನ್ನಡ ಪತ್ರಕರ್ತರೆಂದರೆ ಲೋಕಲ್, ಇಂಗ್ಲಿಷ್ ಪತ್ರಕರ್ತರು ಎಂದರೆ ಸ್ವಲ್ಪ ಲೆವೆಲ್ ಜಾಸ್ತಿ ಎಂದುಕೊಂಡು ಹೋಗಿದ್ದ ಡಿಕೆಶಿ ಸಾಹೇಬರಿಗೆ ಅಲ್ಲಿ ನಿಂತುಕೊಂಡು ನಗಬೇಕೋ ಎದ್ದು ಹೋಗಬೇಕೋ ಗೊತ್ತಾಗಲಿಲ್ಲ.

(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ: ಕನ್ನಡಪ್ರಭ)