Asianet Suvarna News Asianet Suvarna News

ಕೊಪ್ಪಳ ತಾಲೂಕಿನ ಪಿಎಸ್ಐ ಜಯಪ್ರಕಾಶ್ ದರ್ಪ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಪಿಎಸ್ಐ ಆಡಿಯೋ

Koppal PSIs Ego Is Revealed Through This Audio Tape

ಕೊಪ್ಪಳ(ಸೆ.24): ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಯನ್ನು ಸಾಯಲಿ ಬಿಡಿ ನಾವೇನು ಮಾಡೋಕೆ ಆಗುತ್ತದೆ ಅಂತ ಪಿಎಸ್​ಐ ಒಬ್ಬರು ಕೀಳು ಮಟ್ಟದಲ್ಲಿ ಮಾತನಾಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳ ತಾಲೂಕಿನ ಮುನಿರಾಬಾದ ಪಿಎಸ್​​ಐ ಜಯಪ್ರಕಾಶ್​ ಶಾಸಕ ಇಕ್ಬಾಲ್ ಅನ್ಸಾರಿಗೆ ಸಾಯಲಿ ಬಿಡಿ ನಾವೇನು ಮಾಡಲು ಆಗುತ್ತದೆ ಅಂತ ಮಾತಾಡಿದ್ದಾರಂತೆ. ಅನ್ಸಾರಿ ಬಗ್ಗೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಒಣ ಬಳ್ಳಾರಿ ಗ್ರಾಮದಲ್ಲಿ ಕೋಕೋ ಪಂದ್ಯಾವಾಳಿ ಆಯೋಜನೆ ಮಾಡಲಾಗಿತ್ತು.

ಈ ವೇಳೆ ಒಣಬಳ್ಳಾರಿ ಹಾಗೂ ಇಂದರಗಿ ಗ್ರಾಮಸ್ಥರ ಮಧ್ಯೆ ಶಾಸಕ ಇಕ್ಬಾಲ್ ಅನ್ಸಾರಿ ಎದುರೇ ಗಲಾಟೆ ನಡೆದಿತ್ತು. ಆಗ ಅಲ್ಲಿದ್ದ ಗ್ರಾಮಸ್ಥರು ಮುನಿರಾಬಾದ ಪಿಎಸ್​ಐ ಜಯಪ್ರಕಾಶ್​ಗೆ ಫೋನ್ ಮಾಡಿ ಗಲಾಟೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪಿಎಸ್​ಐ ಜಯಪ್ರಕಾಶ್​ ಮಾತ್ರ ಇಕ್ಬಾಲ್ ಅನ್ಸಾರಿ ಸಾಯಲಿ ಬಿಡಿ, ನಾವೇನು ಮಾಡಲು ಆಗುತ್ತದೆ ಅಂತ ಪ್ರತಿಕ್ರಿಯಿಸಿದ್ದರಂತೆ.

Latest Videos
Follow Us:
Download App:
  • android
  • ios