ಪ್ರವಾಹ ಪೀಡಿತ ವಯನಾಡಿಗೆ ರಾಹುಲ್ ಸಾಂತ್ವನ!
ಪ್ರವಾಹ ಪೀಡಿತ ವಯನಾಡಿಗೆ ರಾಹುಲ್ ಸಾಂತ್ವನ| ನಿರಾಶ್ರಿತರಿಗೆ ಕಂಗಾಲಾಗದಂತೆ ರಾಹುಲ್ ಗಾಂಧಿ ಮನವಿ
ವಯನಾಡ್[ಆ.13]: ಎಡೆಬಿಡದೇ ಸುರಿದ ಮಳೆಯಿಂದಾಗಿ ಉಂಟಾದ ಭಾರಿ ಪ್ರವಾಹಕ್ಕೆ ತುತ್ತಾದ ಸ್ವಕ್ಷೇತ್ರ ವಯನಾಡು ಜನತೆಗೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಸಹಾಯ ಹಸ್ತ ಚಾಚುವುದಾಗಿ ಭರವಸೆ ನೀಡಿದ್ದಾರೆ. ಪ್ರವಾಹದಿಂದಾದ ಹಾನಿಗೆ ಧೃತಿಗೆಡಬೇಡಿ. ಪುನಃ ಬದುಕು ಕಟ್ಟಿಕೊಳ್ಳಲು ನೆರವಾಗುವುದಾಗಿ ತಮ್ಮನ್ನು ಲೋಕಸಭೆಗೆ ಆರಿಸಿ ಕಳುಹಿಸಿದ ಮತದಾರರಿಗೆ ಧೈರ್ಯ ಹೇಳಿದ್ದಾರೆ.
ತೀವ್ರ ಹಾನಿಯುಂಟಾದ ಪುಥುಮಲಾ ಸೇರಿದಂತೆ ಕ್ಷೇತ್ರದ ಇನ್ನಿತರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ರಾಹುಲ್ ಗಾಂಧಿ, ಪ್ರವಾಹದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪ್ರಧಾನಿ ನರೇಂದ್ರ ಮೋದಿಗೂ ಮಾಹಿತಿ ನೀಡಿ ಅಗತ್ಯ ನೆರವು ಕಲ್ಪಿಸುವುದಾಗಿ ಹೇಳಿದ್ದಾರೆ.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಅಲ್ಲದೆ, ಈಗಾಗಲೇ ರಾಜ್ಯದ ಅಧಿಕಾರಿಗಳ ಜೊತೆಯೂ ಮಾತನಾಡಿದ್ದೇನೆ, ಕೂಡಲೆ ಅಗತ್ಯ ವಸ್ತುಗಳನ್ನು, ಔಷಧಗಳನ್ನು ಪೂರೈಕೆ ಮಾಡುವಂತೆ ಸೂಚಿಸಿದ್ದೇನೆ. ಕಷ್ಟದ ಕಾಲದಲ್ಲಿ ಸಾರ್ವಜನಿಕರೂ ನೆರವಿಗೆ ಮುಂದಾಗಿ ಎಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.