Asianet Suvarna News Asianet Suvarna News

ನಿಪಾಗೆ ಬಲಿಯಾದವರಿಗೆ ವೈದ್ಯನಿಂದಲೇ ಅಂತ್ಯಸಂಸ್ಕಾರ

ನಿಪಾ ವೈರಾಣು ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಯಾರೂ ಮುಂದೆ ಬಾರದ ಹಿನ್ನೆಲೆ ಕೇರಳದ ಸರ್ಕಾರಿ ವೈದ್ಯರೊಬ್ಬರು ತಾವೇ ಮುಂದೆ ನಿಂತು ವಿಧಿ-ವಿಧಾನ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Kerala doctor performs last rites of Nipah victims

ಕೋಳಿಕ್ಕೋಡ್: ‘ನಿಪಾ’ ವೈರಾಣು ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಯಾರೂ ಮುಂದೆ ಬಾರದ ಹಿನ್ನೆಲೆ ಕೇರಳದ ಸರ್ಕಾರಿ ವೈದ್ಯರೊಬ್ಬರು ತಾವೇ ಮುಂದೆ ನಿಂತು ವಿಧಿ-ವಿಧಾನ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೋಳಿಕ್ಕೋಡ್ ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ| ಆರ್.ಎಸ್. ಗೋಪಕುಮಾರ್ ಅವರ ಈ ಕೆಲಸ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ವೈದ್ಯರ ಸ್ವಾರ್ಥರಹಿತ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಸಂಸ್ಕಾರ ನಡೆಸಿದರೂ ಈ ಸೋಂಕು ಹರಡುವ ಹಿನ್ನೆಲೆಯಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕುಟುಂಬದವರೇ ಮುಂದೆ ಬರುತ್ತಿಲ್ಲ. 

ಇಂಥ ವೇಳೆ ಡಾ| ಗೋಪಕುಮಾರ್ ಅವರು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮೂರು ಶವಗಳಿಗೆ  ತಾವೇ ಮುಂದೆ ನಿಂತು ಅಂತಿಮ ಸಂಸ್ಕಾರ ನಡೆಸಿದ್ದರೆ, 12 ಶವಗಳ ಅಂತ್ಯ ಕ್ರಿಯೆಯ ಜವಾಬ್ದಾರಿ ಹೊತ್ತು ಆ ಕಾರ್ಯ ನಿರ್ವಹಿಸಿದ್ದಾರೆ. 

ಕನ್ನಡಿಗನಿಗೂ ಈ ವೈದ್ಯ ನೆರವು: ಡಾ| ಗೋಪಕುಮಾರ್ ಅವರು ಕರ್ನಾಟಕ ಮೂಲದ ಮಹಿಳೆಯೊಬ್ಬಳ ಅಂತ್ಯಸಂಸ್ಕಾರದಲ್ಲೂ ಆಕೆಯ ಗಂಡನಿಗೆ ಭಾರಿ ನೆರವು ನೀಡಿ ಗಮನ ಸೆಳೆದಿದ್ದಾರೆ.

Follow Us:
Download App:
  • android
  • ios