ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ಧೆ ಪಡೆದಿರೋ ಗೃಹ ಸಲಹೆಗಾರ ಕೆಂಪಯ್ಯಗೆ ಸಿಬಿಐ ಸಂಕಷ್ಟ ಎದುರಾಗಲಿದೆ. ಕೆಂಪಯ್ಯ ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೋಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು(ಸೆ.15): ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ಧೆ ಪಡೆದಿರೋ ಗೃಹ ಸಲಹೆಗಾರ ಕೆಂಪಯ್ಯಗೆ ಸಿಬಿಐ ಸಂಕಷ್ಟ ಎದುರಾಗಲಿದೆ. ಕೆಂಪಯ್ಯ ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೋಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧಪಟ್ಟಂತೆ 1990 ರಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸಿ ಕೆಂಪಯ್ಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ಧೆ ಪಡೆದಿದ್ದಾರೆ ಎಂದು ಸಾಬೀತು ಮಾಡಿತ್ತು. ಇಲಾಖೆ ವರದಿ ಆಧಾರಿಸಿ ಅಜಯ್ ಕುಮಾರ್ ಸಿಂಗ್ ಕ್ರಮ ಕೈಗೊಳ್ಳುವ ಮುನ್ನ ಕೆಂಪಯ್ಯ ಸ್ವಯಂ ನಿವೃತ್ತಿ ಪಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಕೆಂಪಯ್ಯನನ್ನ ಸಿಬಿಐ ಭೂತ ಕಾಡಲಾರಂಭಿಸಿದೆ.
ಒಂದು ಕಡೆ ಸರ್ಕಾರ ಕಂಪಯ್ಯನನ್ನ ಸೈಡ್ ಲೈನ್ ಮಾಡ್ತಿದ್ರೆ, ಸದ್ಯದಲ್ಲಿ ಸಿಬಿಐ ಭೂತ ಕೆಂಪಯ್ಯನನ್ನು ಕಾಡುವುದು ನಿಶ್ಚಿತ.
