Asianet Suvarna News Asianet Suvarna News

ಕಾವೇರಿ ನಿರ್ವಹಣಾ ಮಂಡಳಿ ರಚನೆ ಮುಂದೂಡಿಕೆ

kaveri water management borad decission postphoned

ನವದೆಹಲಿ(ಅ.04): ಕೊನೆಗೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನ ಅಕ್ಟೋಬರ್ 18ರವರೆಗೆ ಸುಪ್ರೀಂಕೋರ್ಟ್ ಮುಂದೂಡಿದೆ. ನಿರ್ವಹಣಾ ಮಂಡಳಿ ರಚನೆ ಅಧಿಕಾರ ಸುಪ್ರೀಂಕೋರ್ಟ್`ಗೆ ಇಲ್ಲ ಎಂಬ ಅಟಾರ್ನಿ ಜನರಲ್ ವಾದವನ್ನ ಆಲಿಸಿದ ಕೋರ್ಟ್, ಸದ್ಯಕ್ಕೆ ಆ ಆದೇಶವನ್ನ ಮುಂದೂಡುವುದಾಗಿ ಹೇಳಿದೆ.

ಮೇಲುಸ್ತುವಾರಿ ಸಮಿತಿ ಇನ್ನೂ ಜೀವಂತವಾಗಿದೆ. ಈ ಸಮಿತಿ ಅ.7ರಿಂದ ಅ.17ರವರೆಗೆ ಅಧ್ಯಯನ ಮಾಡಲಿ, ಕರ್ನಾಟಕ, ತಮಿಳುನಾಡಿಗೆ ತೆರಳಿ ವಸ್ತು ಸ್ಥಿತಿ ಅಧ್ಯಯನ ಮಾಡಲಿ. ಅ.17ರಂದು ಸುಪ್ರೀಂಕೋರ್ಟ್​ಗೆ ವರದಿ ನೀಡಲಿ, ಅ.18ರಂದು ಈ ಬಗ್ಗೆ ವಿಚಾರಣೆ ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.