ಸಾಮೂಹಿಕ ರಾಜೀನಾಮೆಯಿಂದ ವಿಶ್ವಾಸ ಮತಯಾಚನೆಗೆ ಹೋದ ರಾಜ್ಯ ರಾಜಕಾರಣ | ಸ್ಪೀಕರ್ ಕಚೇರಿಯಿಂದ ಸುಪ್ರೀಂ ಅಂಗಳಕ್ಕೆ ಶಾಸಕರ ಬಂಡಾಯ ಪ್ರಕರಣ 

ಬೆಂಗಳೂರು (ಜು.12): ಅತಂತ್ರ ಪರಿಸ್ಥಿತಿಯಲ್ಲಿ ದಿನ ದೂಡುತ್ತಿರುವ ಮೈತ್ರಿ ಸರ್ಕಾರ, ವಿಶ್ವಾಸ ಮತಯಾಚನೆಯ ಅಸ್ತ್ರ ಪ್ರಯೋಗಿಸಿದೆ. ಅತ್ತ ಬಂಡಾಯವೆದ್ದಿರುವ ಶಾಸಕರು ಮುಂಬೈ, ಹೈದ್ರಾಬಾದ್ ಹೋಟೆಲ್‌ಗಳಿಗೆ ಸೇರಿಕೊಂಡಿದ್ದಾರೆ. ಇತ್ತ ಬಿಜೆಪಿಯೂ ತನ್ನ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಸಕರ ರಾಜೀನಾಮೆ ಅಂಗೀಕಾರ ವಿಚಾರ ಸ್ಪೀಕರ್ ಅಂಗಳದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇನ್ನೊಂದು ಕಡೆ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಮೈತ್ರಿ ಸರ್ಕಾರ ಖುದ್ದಾಗಿ ವಿಶ್ವಾಸಮತ ಯಾಚನೆಗೆ ಹೊರಟಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. 

ಈ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೀವೇ ನೋಡಿ....