Asianet Suvarna News Asianet Suvarna News

'ನಾವೆಲ್ಲ ಅಣ್ತಮ್ಮಾಸ್‌, ಪ್ಲೀಸ್‌ ವಾಪಸ್‌ ಬನ್ನಿ!'

ನಾವೆಲ್ಲ ಅಣ್ತಮ್ಮಾಸ್‌, ಪ್ಲೀಸ್‌ ವಾಪಸ್‌ ಬನ್ನಿ!| ಅತೃಪ್ತ ಶಾಸಕರಿಗೆ ಡಿಕೆಶಿ ಮನವಿ

Karnataka Political Crisis Congress Leader DK Shivakumar Requests Rebel MLAs to Return Back
Author
Bangalore, First Published Jul 17, 2019, 8:26 AM IST

ಬೆಂಗಳೂರು[ಜು.17]: ಕಾಂಗ್ರೆಸ್‌ ನಮ್ಮ ಮನೆ. ನಾವೆಲ್ಲ ಅಣ್ಣತಮ್ಮಾಸ್‌... ಯಾವುದೇ ಸಮಸ್ಯೆಯಿದ್ದರೂ ಬಗೆಹರಿಸುತ್ತೇವೆ. ಮನೆಗೆ ವಾಪಸ್‌ ಬನ್ನಿ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮತ್ತೊಮ್ಮೆ ಅತೃಪ್ತ ಶಾಸಕರಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದು, ಇದನ್ನು ನಂಬಿ ನಿಮ್ಮ ಜೀವನ ಹಾಳು ಮಾಡಿಕೊಳ್ಳುವುದಕ್ಕೆ ಮುಂದಾಗಬೇಡಿ. ನ್ಯಾಯಾಲಯದ ಬಗ್ಗೆ ನಮಗೆ ಅಪಾರ ಗೌರವವಿದೆ. ನ್ಯಾಯಾಲಯ ಕೊಡುವ ತೀರ್ಪಿನಲ್ಲಿಯೂ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಮನವಿ ಮಾಡಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಮ್ಮ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಿಂದ ನಮಗೆ ಅನ್ಯಾಯವಾಗುವುದಿಲ್ಲ. ನಾವು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ, ದಯವಿಟ್ಟು ಮನೆಗಳಿಗೆ ಹಿಂದಿರುಗಿ ಎಂದು ಕೋರಿದರು.

Follow Us:
Download App:
  • android
  • ios