ಚಂಡಮಾರುತದ ಪರಿಣಾಮವಾಗಿ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ, ಎಂದು ಹವಾಮಾನ ಇಲಾಖೆ ಪ್ರಭಾರ ನಿರ್ದೇಶಕ ಸುಂದರ್ ಎಂ. ಮೈತ್ರಿ ಹೇಳಿದ್ದಾರೆ.
ಬೆಂಗಳೂರು (ಡಿ.01): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಪಾಂಡಿಚೇರಿಗೆ ‘ನಾಡಾ’ ಚಂಡಮಾರುತ ಭೀತಿ ಎದುರಾಗಿದೆ.
ಚಂಡಮಾರುತದ ಪರಿಣಾಮವಾಗಿ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ, ಎಂದು ಹವಾಮಾನ ಇಲಾಖೆ ಪ್ರಭಾರ ನಿರ್ದೇಶಕ ಸುಂದರ್ ಎಂ. ಮೈತ್ರಿ ಹೇಳಿದ್ದಾರೆ.
ರಾಜ್ಯದ ಬೆಂಗಳೂರು, ಮಂಡ್ಯ, ಮತ್ತು ಕೋಲಾರ ಸೇರಿ ಹಲವೆಡೆ ಈಗಾಗಲೇ ಮೋಡ ಕವಿದ ವಾತವರಣವಿದೆ.
ಗಂಟೆಗೆ ೫ ಕಿಲೋಮೀಟರ್ ವೇಗದಲ್ಲಿ ಸಾಗುತ್ತಿರುವ ನಾಡಾ ಸ್ಕೈಕ್ಲೊನ್ ನಾಳೆ 12 ಗಂಟೆ ಚೆನ್ನೈ’ಗೆ ಬರಲಿದೆ.
