ಸಿಎಂ ವಿರುದ್ಧ ದರ್ಶನ್ ಅವಹೇಳನಕಾರಿ ಪೋಸ್ಟ್ ?
- ದರ್ಶನ್ ತೂಗುದೀಪ್ ಹೆಸರಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಸ್ಟೇಟಸ್
- ಅಖಿಲ ಕರ್ನಾಟಕ ಕುಮಾರಸ್ವಾಮಿ ಅಭಿಮಾನಿಗಳ ಸೇವಾ ಸಂಘದಿಂದ ದೂರು
ಬೆಂಗಳೂರು[ಜೂ.12]: ನಟ ದರ್ಶನ್ ತೂಗುದೀಪು ಹೆಸರಿನ ಫೇಕ್ ಅಕೌಂಟ್'ನಿಂದ ಸಿಎಂ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಪೋಸ್ಟ್ ಹಾಕಲಾಗಿದೆ.
ಈ ಸಲ ಕಪ್ ನಮ್ದೇ ಅಂತ ಅಂತಿದ್ದವ್ರು ಹೇಳುತ್ತಿದ್ದವ್ರು ಆ ಕಪ್ಪು ಇದೇ ಅಂತ ಹೇಳೋಕೇನಾಗಿತ್ತೋ ಎಂದು ಸಿಎಂ ಕುಮಾರಸ್ವಾಮಿ ಅವರ ಕಪ್ಪು ಬಣ್ಣದ ಚಿತ್ರ ಪೋಸ್ಟ್ ಹಾಕಿ ಅಣಕಿಸಿದ್ದಾರೆ.
ಈ ಪೋಸ್ಟ್ ಅನ್ನು ವಿರೋಧಿಸಿ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ದೂರು ನೀಡಿದೆ. ದೂರನ್ನು ದಾಖಲಿಸಿರುವ ಪೊಲೀಸರು ಸೈಬರ್ ಪೊಲೀಸರ ಮೂಲಕ ತನಿಖೆ ಆರಂಭಿಸಿದ್ದಾರೆ.