Asianet Suvarna News Asianet Suvarna News

ಬಿಎಸ್‌ವೈ ಮೇಲೆ ಸಿಎಂ ಕುಮಾರಸ್ವಾಮಿ ‘ಶಿವರಾಮ’ ಅಸ್ತ್ರ ಪ್ರಯೋಗ

ನಿನ್ನೆ ಬಿಜೆಪಿ ಮತ್ತು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದರೆ ಇಂದು ಅದು ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಇದೀಗ ಈ ವಾಕ್ಸಮರ ಸಿಎಂ  ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿಎಸ್‌ ವೈ ಆಗಿದೆ.

 

Karnataka cm hd kumaraswamy slams b s yeddyurappa
Author
Bengaluru, First Published Sep 20, 2018, 11:33 AM IST | Last Updated Sep 20, 2018, 11:40 AM IST

ಬೆಂಗಳೂರು[ಸೆ.20]  ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಿರಂಗವಾಗಿಯೇ ಬಿಎಸ್‌ ವೈಗೆ ಎಚ್ಚರಿಕೆ ನೀಡಿದ್ದು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ನಮ್ಮ ಬಳಿ ಶಿವರಾಮ ಕಾರಂತ ಬಡಾವಣೆ ಅಸ್ತ್ರ ಇದೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಪದ ಬಳಕೆ ಹಿಡಿತ ಇರೋದು ಒಳ್ಳೆಯದು ಎಂಬ ಎಚ್ಚರಿಕೆ ನೀಡಿದ ಕುಮಾರಸ್ವಾಮಿ ಸರಕಾರ ನನ್ನ ಕೈಯಲ್ಲಿದೆ. ನಾಳೆ ಏನು ಮಾಡಬೇಕು ಎಂಬ ಶಕ್ತಿ ನನ್ನಲ್ಲಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಗಾಜಿನ ಮನೆಯಲ್ಲಿ ಕುಳಿತ ಬಿಜೆಪಿ ಬೇರೆಯವರ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದೆ. ನಾವು ಬೀದಿಯಲ್ಲಿದ್ದೇವೆ ನೀವು ಗಾಜಿನ ಮನೆಯಲ್ಲಿದ್ದೀರಿ.. ಅಪ್ಪ-ಮಕ್ಕಳು ಎಂದು ಲಘುವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಅಪ್ಪ ಮಕ್ಕಳು ಲೂಟಿ ಕೋರರು ಅಂತ ಹೇಳ್ತಾರೆ. ನಾವೇನು ಲೂಟಿ ಮಾಡಿದ್ದೇವೆ ಅನ್ನೋದ್ನ ಬಿಎಸ್ ವೈ ಹೇಳಲಿ ಬಿಎಸ್ ವೈ ನನಗಿಂತ ಹಿರಿಯರಿದ್ದಾರೆ, ಮಾತಿನ ಮೇಲೆ ಹಿಡಿತವಿರಲಿ ಎಂದಿದ್ದಾರೆ.

2010ರ ಶಿವರಾಮ ಕಾರಂತ ಬಡಾವಣೆ ಢಿನೋಟಿಫಿಕೇಶನ್ ಪ್ರಕರಣದ ಸತ್ಯ ಜನರಿಗೆ ಗೊತ್ತಿಲ್ಲವೆ ಎಂದು ಪ್ರಶ್ನೆ ಮಾಡಿರುವ ಸಿಎಂ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಿಎಸ್‌ ವೈ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆಯೇ? ಎಂಬುದು ಸದ್ಯಕ್ಕೆ ನಮ್ಮ ಮುಂದೆ ಇರುವ ಪ್ರಶ್ನೆ.
 

Latest Videos
Follow Us:
Download App:
  • android
  • ios