Asianet Suvarna News Asianet Suvarna News

ಮಧ್ಯಪ್ರದೇಶದಲ್ಲಿ 2 ಬಾರಿ ಗೆದ್ದಿದ್ದ ಈ ಕನ್ನಡಿಗ ರಾಜ್ಯದಲ್ಲಿ ಸೋತಿದ್ದರು

ಆದರೆ 1997ರಲ್ಲಿ ಧಾರವಾಡದ ಉತ್ತರ ಕ್ಷೇತ್ರದಲ್ಲಿ ಸರೋಜಿನಿ ಮಹಿಷಿ ಅವರ ಎದುರು ಪರಾಭವಗೊಂಡಿದ್ದರು

Kannadiga Win Two Time MP at Madyapradesh Election

ಭಾರತೀಯ ಜನಸಂಘ ಹಾಗೂ ಬಿಜೆಪಿ ನಾಯಕರಾಗಿದ್ದ ಜಗನ್ನಾಥರಾವ ಜೋಶಿ ಅವರು ಗದಗ ಜಿಲ್ಲೆಯ ನರ ಗುಂದದವರು. ಮಧ್ಯಪ್ರದೇಶದ ಭೋಪಾಲ್‌ನಿಂದ 1967ರಲ್ಲಿ, ಶಾಜಾಪುರ ಕ್ಷೇತ್ರದಿಂದ 1971ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 1997ರಲ್ಲಿ ಧಾರವಾಡದ ಉತ್ತರ ಕ್ಷೇತ್ರದಲ್ಲಿ ಸರೋಜಿನಿ ಮಹಿಷಿ ಅವರ ಎದುರು ಪರಾಭವಗೊಂಡಿದ್ದರು. ತನ್ಮೂಲಕ ಹೊರರಾಜ್ಯದಲ್ಲಿ ಗೆದ್ದ ಜೋಶಿ ಅವರಿಗೆ ತವರು ರಾಜ್ಯ ದಲ್ಲೇ ಸೋಲುಂಟಾಗಿತ್ತು. 1978ರಿಂದ 1984ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದ ಅವರು 1991ರಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನ ಹೊಂದಿದರು

Follow Us:
Download App:
  • android
  • ios