ಮಂಡ್ಯದ ಗಂಡು, ಕರ್ನಾಟಕದ ಕರ್ಣ ಅಂಬರೀಶ್ ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ಕೇವಲ ನಾಯಕ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಪ್ರಬಲ ರಾಜಕಾರಣಿಯಾಗಿಯೂ ಹೆಸರು ಮಾಡಿದ್ದರು. ಕಾವೇರಿ ನೀರಿನ ವಿಚಾರದಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದರು ರೆಬಲ್ ಸ್ಟಾರ್.

ಬೆಂಗಳೂರು[ನ.24] ಕರ್ನಾಟಕದ ಮಟ್ಟಿಗೆ ಕರಾಳ ಶನಿವಾರ. ಬಸ್ ದುರಂತದಲ್ಲಿ 30 ಜನರನ್ನು ಕಳೆದುಕೊಂಡ ರಾಜ್ಯ ಅದೇ ದಿನ ರಾತ್ರಿಯ ವೇಳೆಗೆ ಕನ್ನಡ ಚಿತ್ರರಂಗದ ಹಿರಿಯಣ್ಣನನ್ನು ಕಳೆದುಕೊಂಡಿದೆ. ರೆಬಲ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಕೆಟ್ ಪಡೆದುಕಿಂಡಿರಲಿಲ್ಲ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಷ್ಟೂ ಅಭ್ಯರ್ಥಿಗಳ ಪಟ್ಟಿ ಬಿಡಗುಡೆ ಮಾಡಿದ್ದರೂ ಅಂಬರೀಶ್ ಸ್ಥಾನಕ್ಕೆ ಅಂದರೆ ಮಂಡ್ಯಕ್ಕೆ ಯಾರನ್ನು ಘೋಷಣೆ ಮಾಡಿರಲಿಲ್ಲ. ಅಂದರೆ ಅಂಬರೀಶ್ ತಾಕತ್ತು ನಿಮಗೆ ಗೊತ್ತಾಗುತ್ತದೆ. ನಂತರ ಅಂಬರೀಶ್ ಸ್ಪರ್ಧಿಸುವ ಮನಸ್ಸು ಮಾಡಿರಲಿಲ್ಲ.

ಕಾಲಿಗೆ ಬಿದ್ದಿದ್ದ ಶಿವರಾಮೇಗೌಡ: ಮಂಡ್ಯ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯಗಳಿಸಿದ್ದ ಜೆಡಿಎಸ್ ನ ಶಿವರಾಮೆಗೌಡ ಅಂಬರೀಶ್ ಕಾಳಿಗೆ ಬಿದ್ದಿದ್ದರು.

ವಸತಿ ಸಚಿವ ಸ್ಥಾನದಿಂದ ಗೇಟ್ ಪಾಸ್: ಸಿದ್ದರಾಮಯ್ಯ ಸರಕಾರದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರನ್ನು ಕಾರಣವಿಲ್ಲದೇ ಕೈ ಬಿಡಲಾಗಿತ್ತು. ಇಲ್ಲಿಂದಲೇ ಅಂಬರೀಶ್ ರಾಜಕಾರಣದಿಂದ ದೂರವಾಗಿದ್ದರು.